ಮಂಗಳೂರು: ರಸ್ತೆ ಕಾಮಗಾರಿ ಅವ್ಯವಸ್ಥೆ; ಸಾಮಾಜಿಕ ಕಾರ್ಯಕರ್ತನಿಂದ ವಿನೂತನ ಪ್ರತಿಭಟನೆ

Prasthutha|

ಮಂಗಳೂರು: ರಸ್ತೆ ಕಾಮಗಾರಿಯ ಅವ್ಯವಸ್ಥೆಯ ‌ವಿರುದ್ಧ ತಿರುಗಿಬಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ರಸ್ತೆಯ ಜಲ್ಲಿಯನ್ನು ಗುಡಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್ ಎಂಬವರೇ ಈ ರೀತಿಯಲ್ಲಿ ವಿನೂತನ ಪ್ರತಿಭಟನೆ ಮಾಡಿದವರು. ಬೆಂದೂರುವೆಲ್ ನಲ್ಲಿರುವ ಥೆರೆಸಾ ಶಾಲೆಯ ಮುಂಭಾಗದಲ್ಲಿ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಜಲ್ಲಿಗಳು ಎದ್ದಿವೆ. ಪರಿಣಾಮ ವಾಹನ ಸಂಚಾರದ ವೇಳೆ ರಸ್ತೆಯಲ್ಲಿನ ಜಲ್ಲಿಗಳು ಪಾದಚಾರಿಗಳ ಮುಖಕ್ಕೇ ರಾಚುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಬಳಿ ಎಡತಾಕಿದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಹಿನ್ನೆಲೆಯಲ್ಲಿ ಇಂದು ಜೆರಾಲ್ಡ್ ಟವರ್ ರಸ್ತೆಯನ್ನು ಗುಡಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಜೆರಾಲ್ಡ್ ಟವರ್ ಈ ಹಿಂದೆಯೂ ಸಾಕಷ್ಟು ಅವ್ಯವಹಾರಗಳ ಬಗ್ಗೆ ದನಿ ಎತ್ತಿದ್ದರು. ಇದೀಗ ರಸ್ತೆ ಗುಡಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.

Join Whatsapp