ಬಿಎಸ್ಪಿ, ಬಿಜೆಪಿ ಒಳಗೊಂಡಂತೆ ಹಲವು ಮುಖಂಡರು ಸಮಾಜವಾದಿ ಪಕ್ಷ ಸೇರ್ಪಡೆ

Prasthutha|

ಲಕ್ನೋ: ಬಿಎಸ್ಪಿಯಿಂದ ಉಚ್ಛಾಟಿತ ಶಾಸಕ ವಿನಯ್ ಶಂಕರ್ ತಿವಾರಿ, ಬಿಜೆಪಿ ಶಾಸಕ ದಿಗ್ವಿಜಯ ನಾರಾಯಣ ಚೌಬೆ ಮತ್ತು ಇತರ ಹಲವಾರು ಬ್ರಾಹ್ಮಣ ಮುಖಂಡರು ಭಾನುವಾರ ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಸಮಾಜದಲ್ಲಿ ಪಕ್ಷ (ಎಸ್.ಪಿ) ಗೆ ಸೇರ್ಪಡೆಗೊಂಡರು.

- Advertisement -

ಉತ್ತರಪ್ರದೇಶ ಸರ್ಕಾರ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಲಾಗುತ್ತಿದೆ ಎಂದು ಈ ವೇಳೆ ವಿನಯ್ ಶಂಕರ್ ತಿವಾರಿ ಆರೋಪಿಸಿದ್ದಾರೆ. ಮಾತ್ರವಲ್ಲ ಆದಿತ್ಯನಾಥ್ ಸರ್ಕಾರದಿಂದ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಮತ್ತು ರಾಜ್ಯದಲ್ಲಿ ಎನ್ಕೌಂಟರ್ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್, ಈ ಮೇಲಿನ ಮುಖಂಡರ ಪಕ್ಷ ಸೇರ್ಪಡೆಯೊಂದಿಗೆ ಬಿಜೆಪಿ ಸೋಲುವುದು ಖಚಿತವಾಗಿದೆ. ಕಾರಣ ಬಿಜೆಪಿ ಪ್ರತಿಯೊಂದು ಸಮುದಾಯವನ್ನು ಗುರಿಯಾಗಿಸಿದೆ ಎಂದು ಅವರು ತಿಳಿಸಿದರು.

- Advertisement -

ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ.



Join Whatsapp