ಕಾರ್ಟೂನ್ ಮೂಲಕ ಟಾಂಗ್ ಕೊಟ್ಟ ಸಿದ್ದು: ಮೋದಿಗೆ ಪರೋಕ್ಷ ಎಚ್ಚರಿಕೆ?!

Prasthutha|

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಿ ಮುಹಮ್ಮದ್ ಅವರ ಕಾರ್ಟೂನ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಜನರಿಂದ ಗದ್ದುಗೆ ಏರಿದವರು ಜನಪರ ಆಡಳಿತ ನಡೆಸದಿದ್ದರೆ ಜನರಿಂದಲೇ ಭಾರೀ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

ಸಿದ್ದರಾಮಯ್ಯ ಅವರು ಹಂಚಿಕೊಂಡ ಕಾರ್ಟೂನಿನ ಈ ಟ್ವೀಟ್‌ ಇದೀಗ ವೈರಲ್‌ ಆಗಿದ್ದು ಭಾವಚಿತ್ರದ ಚೌಕಟ್ಟನ್ನು ಖಾಲಿ ಬಿಟ್ಟಿರುವುದೇಕೆ, ಯಾರನ್ನು ಉದ್ದೇಶಿಸಿ ಅವರು ಟ್ವೀಟ್‌ ಮಾಡಿದ್ದಾರೆ ಎಂಬ ಚರ್ಚೆಯೂ ಶುರುವಾಗಿದೆ. ಪ್ರಧಾನಿ ಮೋದಿಯನ್ನೇ ಉದ್ದೇಶಿಸಿ ಈ ಟ್ವೀಟ್‌ ಮಾಡಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.

ಈ ಊಹಾಪೋಹಾಗಳೇನಿರಲಿ, ಯಾವುದೇ ದೇಶವಾಗಲಿ ಅಲ್ಲಿನ ಸರ್ಕಾರಗಳು ಜನಪರವಾದ ರೀತಿಯಲ್ಲಿ ಆಡಳಿತ ನಡೆಸದಿದ್ದರೆ ಪ್ರಜೆಗಳಿಂದಲೇ ಭಾರಿ ವಿರೋಧ ಎದುರಿಸಬೇಕಾಗುತ್ತದೆ. ಅಧಿಕಾರ ಕಳೆದುಕೊಂಡು ಅಜ್ಞಾತರಾಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Join Whatsapp