ಸಿದ್ದರಾಮಯ್ಯ ನೀಡಿದ ಹಣ ಬಿಸಾಕಿ, ನಮಗೆ ನ್ಯಾಯ ಬೇಕು ಎಂದ ಮಹಿಳೆ!

Prasthutha|

- Advertisement -

ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರುನಲ್ಲಿ ಜುಲೈ 6 ರಂದು ನಡೆದ ಗುಂಪುಘರ್ಷಣೆ ನಂತರ ಡಾಬಾ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡ ಗುಂಪಿನವರನ್ನು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಕೆರೂರು ಘರ್ಷಣೆ ನಂತರ ಡಾಬಾ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡ ಕುಟುಂಬಸ್ಥ ಮಹಿಳೆಗೆ 2 ಲಕ್ಷ ರೂ. ನೀಡಿದರು.

ಈ ವೇಳೆ ಮಹಿಳೆ ನನಗೆ ಹಣ ಬೇಡ ಎಂದು ಸಿದ್ದರಾಮಯ್ಯ ನೀಡಿದ 2 ಲಕ್ಷ ರೂ ಹಣವನ್ನು ಕಾರು ಮೇಲೆ ರಾಜ್ಮಾ ಎನ್ನುವ ಮಹಿಳೆ ಬಿಸಾಕಿದ್ದಾರೆ.

- Advertisement -

ಈ ವೇಳೆ ಮಾತನಾಡಿದ ರಾಜ್ಮಾ, ನಾವು ಅಣ್ಣ ತಮ್ಮಂದಿರಂತೆ ಕೆರೂರುನಲ್ಲಿ ಬದುಕಿದ್ದೇವೆ. ನಮಗೆ ಪರಿಹಾರ ಬೇಡ. ನಮಗೆ ಶಾಂತಿ, ನ್ಯಾಯ ಬೇಕು. ನಮಗೆ ಹಸಿವಾದರೆ ಹಿಂದೂ ಆದ್ರೂ ಆಗಲಿ ಮುಸ್ಲಿಂ ಆದ್ರೂ ಆಗಲಿ ಒಂದು ರೊಟ್ಟಿ ನೀಡುತ್ತಾರೆ ಎಂದು ಹೇಳಿದರು.

Join Whatsapp