ಕೋಲಾರದಿಂದ ಸಿದ್ದರಾಮಯ್ಯ, ವರುಣಾದಿಂದ ನಾನು ಸ್ವರ್ಧೆ: ಯತೀಂದ್ರ

Prasthutha|

ಬೆಂಗಳೂರು: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತ, ನಾನು ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

- Advertisement -


ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ತಂದೆಯವರು ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಅವರ ಸ್ಪರ್ಧೆ ಕೋಲಾರದಿಂದ ಖಚಿತ, ವರುಣಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.


ವರುಣಾ ಕ್ಷೇತ್ರ ಯಾವಾಗಲು ಸಹ ಕಾಂಗ್ರೆಸ್ ಭದ್ರಕೋಟೆ. ವರುಣಾ ಕ್ಷೇತ್ರ ರಚನೆ ಆದಾಗಿನಿಂದಲೂ ಇಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿರೋದು. ಬಿಜೆಪಿಯಿಂದ ಯಾರೇ ನಿಂತರೂ ನಮಗೆ ಭಯವಿಲ್ಲ. ಎಲ್ಲರೂ ಸಹ ಗೆಲ್ಲಬೇಕೆಂದು ಸ್ಟಾಟರ್ಜಿ ಮಾಡುತ್ತಾರೆ. ಅಂತಿಮವಾಗಿ ವರುಣಾ ಕ್ಷೇತ್ರದಲ್ಲಿ ನಾವೇ ಗೆಲ್ಲೋದು ಎಂದು ಹೇಳಿದ್ದಾರೆ.

Join Whatsapp