ಕಷ್ಟದಲ್ಲಿರುವವರಿಗೆ ಅನುಕೂಲವಾಗಲಿ ಎಂದು ಹಣ ಕೊಟ್ಟಿದ್ದೆ: ಸಿದ್ದರಾಮಯ್ಯ ಸ್ಪಷ್ಟನೆ

Prasthutha|

- Advertisement -

ಬಾಗಲಕೋಟೆ: ಜಿಲ್ಲೆಯ ಕೆರೂರ ಗುಂಪು ಘರ್ಷಣೆಯ ಗಾಯಾಳುಗಳ ಕುಟುಂಬಸ್ಥರಿಗೆ ಅನುಕೂಲವಾಗಲಿ ಎಂದು ಹಣ ಕೊಟ್ಟಿದ್ದೆ ಆದರೆ, ಅವರಿಗೆ ಯಾರೋ ಎತ್ತಿಕಟ್ಟಿದ್ದರಿಂದ ಹಣ ಎಸೆದಿರುತ್ತಾರೆ. ಆದರೂ, ನಾವು ಮತ್ತೆ ಹಣವನ್ನು ಕುಟುಂಬಸ್ಥರಿಗೆ ಮರಳಿ ಕಳುಹಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟದಲ್ಲಿರುವವರಿಗೆ ಅನುಕೂಲವಾಗಲಿ ಎಂದು ಹಣ ಕೊಡುತ್ತೇವೆ. ಆ ಹಣ, ಅವರ ಕಷ್ಟಕ್ಕೆಲ್ಲ ಆಗುತ್ತೆ ಅಂತಲ್ಲ. ಮಾನವೀಯತೆ ದೃಷ್ಟಿಯಿಂದ ಕೊಡೋದು. ಏನಾದರೂ ಆದಾಗ ಸರ್ಕಾರದಿಂದ 1 ಲಕ್ಷ, 2 ಲಕ್ಷ ರೂ. ಪರಿಹಾರ ಕೊಡುವುದು ಸಾಮಾನ್ಯ ಎಂದು ಸ್ಪಷ್ಟಪಡಿಸಿದರು.

- Advertisement -

ಕೆರೂರ ಮತ್ತು ಕುಳಗೇರಿಯಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಅಲ್ಲದೇ, ಯಾರೂ ಕೂಡಾ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದರು.

Join Whatsapp