ಚಡ್ಡಿ ಕೇವಲ ಸಂಘ ಅಲ್ಲ, ಮಾನ ಕಾಪಾಡುವ ವಸ್ತ್ರವೂ ಹೌದು: ಚಲವಾದಿ ನಾರಾಯಣಸ್ವಾಮಿ

Prasthutha|

ಕಲಬುರಗಿ: ಚಡ್ಡಿ ಕೇವಲ ಒಂದು ಸಂಘ, ಸಂಸ್ಥೆ ಅಷ್ಟೇ ಅಲ್ಲ, ಅದು ಮಾನ ಕಾಪಾಡುವ ವಸ್ತ್ರವೂ ಹೌದು ಎನ್ನುವುದು ಮರೆಯಬಾರದು ಎಂದು ಕಾಂಗ್ರೆಸ್ ವಿರುದ್ದ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

- Advertisement -

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಡ್ಡಿ ಎನ್ನುವು ಕೇವಲ ಒಂದು ಸಂಘ, ಸಂಸ್ಥೆ ಅಷ್ಟೇ ಅಲ್ಲ, ಅದು ಮಾನ ಕಾಪಾಡುವ ವಸ್ತ್ರವೂ ಹೌದು ಎನ್ನುವುದು ಮರೆಯಬಾರದು. ಅಂಬೇಡ್ಕರ್ ಸ್ಥಾಪಿಸಿದ್ದ ಸಮತಾದಳದ್ದು ಸಹ ಚಡ್ಡಿಯೇ ಇತ್ತಲ್ಲ. ನೆಹರೂ, ಜಾಫರ್ ಶರೀಫ್ ಚಡ್ಡಿ ಹಾಕಿರಲಿಲ್ಲವೇ? ಆವಾಗ ನಿಮಗೆ ತೊಂದರೆ ಅನ್ನಿಸಲಿಲ್ಲ. ಈಗ ಆರ್ ಎಸ್ ಎಸ್ ಚಡ್ಡಿ ಬಳಸುತ್ತಿದ್ದರೆ ನಿಮಗೇನು ತೊಂದರೆ. ನಿಜ ಅರ್ಥದಲ್ಲಿ ನಿಮಗೆ ಸಂಘ ಪರಿವಾರದ ಚಡ್ಡಿ ಕುರಿತು ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದರು.



Join Whatsapp