ಶಿರೂರು ಗುಡ್ಡ ಕುಸಿತ | ಟ್ರಕ್ ಗಂಗಾವಳಿ ನದಿಯಲ್ಲಿ ಇರುವುದು ದೃಢಪಟ್ಟಿದೆ : ಜಿಲ್ಲಾಧಿಕಾರಿ

Prasthutha|

- Advertisement -

ಕಾರವಾರ: ಟ್ರಕ್ ನದಿಯಲ್ಲಿ ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡನ ಸಲಹೆಗಾರರು ,ನಿವೃತ್ತ ಮೇಜರ್ ಇಂದ್ರಬಾಲನ್ ಗಂಗಾವಳಿ ನದಿಯಲ್ಲಿನ ಅವಶೇಷಗಳ ಬಗ್ಗೆ ಅಡ್ವಾನ್ಸ್ಡ್ ಐ ಬೋರ್ಡ್ ಡ್ರೋಣ್ ಬಳಸಿ ಮಾಡಿದ ಅಧ್ಯಯನದ ವರದಿ ಬಂದಿದೆ.‌

ಈಗ ನದಿಯಾಳದಲ್ಲಿರುವ ಟ್ರಕ್ ತಲುಪುವುದು ಹೇಗೆ ಎಂಬ ಚಿಂತನೆ ನಡೆದಿದೆ .ನದಿಯಲ್ಲಿ ಬಿದ್ದ ಕಲ್ಲು ಮಣ್ಣಿನ ರಾಶಿ ಪಕ್ಕದಲ್ಲಿ ನಾಲ್ಕು ಅವಶೇಷಗಳಿವೆ . ನದಿಯ ದಡದಿಂದ 132 ಮೀಟರ್ ದೂರದಲ್ಲಿ ಟ್ರಕ್ ಇದೆ. ಅದರಲ್ಲಿ ಅರ್ಜುನ್ ಸಹ ಇರಬಹುದು. 165 ಮೀಟರ್ ದೂರದಲ್ಲಿ ಒಂದು ರೇಲಿಂಗ್ ಇದೆ. ಇವುಗಳನ್ನು ಮೇಲೆತ್ತಲು‌ ನದಿಯ ನೀರಿನ ವೇಗ ಅಡ್ಡಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.



Join Whatsapp