ಟಿ. ಶೆಟ್ಟಿಗೇರಿ| ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ

Prasthutha|

ಟಿ. ಶೆಟ್ಟಿಗೇರಿ: ಶನಿವಾರ ಆಕಸ್ಮಿಕವಾಗಿ ನೀರು ಪಾಲಾಗಿದ್ದ ಹನ್ನೆರಡು ವರ್ಷದ ಬಾಲಕ ಕಾರ್ಯಪ್ಪ ಮೃತದೇಹ ಇಂದು ಪತ್ತೆಯಾಗಿದೆ.ಶನಿವಾರ ಸಂಜೆ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮದ ಚಟ್ಟಂಗಡ ರೇವತಿ (32) ಹಾಗೂ ಪುತ್ರ ಕಾರ್ಯಪ್ಪ (12) ಲಕ್ಷ್ಮಣತೀರ್ಥ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು.

- Advertisement -

ರೇವತಿ ಅವರ ಮೃತದೇಹ ಭಾನುವಾರ ಪತ್ತೆಯಾಗಿತ್ತು. ಬಾಲ ಕಾರ್ಯಪ್ಪನ ಮೃತದೇಹಕ್ಕಾಗಿ ತೀವ್ರ ಶೋಧ ನಡೆಸಲಾಗಿತ್ತು. ಸ್ಥಳೀಯ ನಿವಾಸಿಗಳ ನಿರಂತರ ಪ್ರಯತ್ನದ ನಂತರ ಇಂದು ಬಾಲಕ ಕಾರ್ಯಪ್ಪನ ಮೃತದೇಹ ಪತ್ತೆಯಾಗಿದೆ. ಶ್ರೀಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp