ಭಾರತದ ಚಿತ್ರಣಕ್ಕೆ ಆಗಿರುವ ಹಾನಿಯನ್ನು ಕ್ರಿಕೆಟಿಗರಿಂದ ಪರಿಹರಿಸಲಾಗದು : ಶಶಿ ತರೂರ್

Prasthutha|

ನವದೆಹಲಿ : ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣಕ್ಕೆ ಆಗಿರುವ ಹಾನಿಯನ್ನು ಕ್ರಿಕೆಟಿಗರ ಟ್ವೀಟ್ ಗಳಿಂದ ಪರಿಹರಿಸಲಾಗದು ಎಂದು ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.

- Advertisement -

ವಿದೇಶಿ ಸೆಲೆಬ್ರಿಟಿಗಳಿಗೆ ಭಾರತದ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುವಂತೆ ಭಾರತ ಸರಕಾರ ಮಾಡುತ್ತಿರುವುದು ನಿಜಕ್ಕೂ ಮುಜುಗರವನ್ನುಂಟು ಮಾಡುತ್ತಿದೆ. ಭಾರತ ಸರಕಾರದ ಅಪ್ರಬುದ್ಧತೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಂದ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣಕ್ಕೆ ಆಗಿರುವ ಹಾನಿಯನ್ನು ಕ್ರಿಕೆಟಿಗರ ಟ್ವೀಟ್ ಗಳಿಂದ ಪರಿಹರಿಸಲಾಗದು ಎಂದು ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ರೈತರೊಂದಿಗೆ ಪರಿಹಾರಗಳನ್ನು ಚರ್ಚಿಸಿ. ಭಾರತವನ್ನು ಮತ್ತೆ ಒಗ್ಗಟ್ಟಾಗಿ ಪಡೆಯಲಿದ್ದೀರಿ ಎಂದು ಶಶಿ ತರೂರ್ ಹೇಳಿದ್ದಾರೆ.

- Advertisement -

ಭಾರತದ ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿರುವ ವಿದೇಶಿ ಸೆಲೆಬ್ರಿಟಿಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತ ಕ್ರಾಂತಿಯ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ, ಭಾರತದ ಸಿನೆಮಾ ತಾರೆಯರು ಸೇರಿದಂತೆ, ಕೆಲವು ಜನಪ್ರಿಯ ಕ್ರಿಕೆಟ್ ತಾರೆಯರೂ ಟ್ವೀಟ್ ಮಾಡಿ ಬಿಜೆಪಿ ಸರಕಾರದ ಬೆಂಬಲಕ್ಕೆ ನಿಂತಿದ್ದರು.

Join Whatsapp