ಸ್ಕಿಟ್‌ನಲ್ಲಿ ಅಂಬೇಡ್ಕರ್​, ದಲಿತರಿಗೆ ಅವಮಾನ| ವಿವಿ ಪ್ರಿನ್ಸಿಪಾಲ್​​ ಸೇರಿದಂತೆ 6 ಜನರ ವಿರುದ್ಧ FIR​

Prasthutha|

ಬೆಂಗಳೂರು: ನಗರದ ಪ್ರತಿಷ್ಠಿತ ಜೈನ್ ವಿಶ್ವವಿದ್ಯಾನಿಲಯದ ಕಾರ್ಯಕ್ರಮದ ಸ್ಕಿಟ್‌ನಲ್ಲಿ ಅಂಬೇಡ್ಕರ್​ ಹಾಗೂ ದಲಿತರಿಗೆ ಅವಮಾನ ಮಾಡಿದ ವಿಚಾರವಾಗಿ ಪ್ರಿನ್ಸಿಪಾಲ್​​ ಸೇರಿದಂತೆ 6 ಜನರ ವಿರುದ್ಧ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

- Advertisement -

ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣಾಧಿಕಾರಿ ದೂರು ಹಿನ್ನೆಲೆ FIR ದಾಖಲಿಸಲಾಗಿದೆ. ಫೆಬ್ರವರಿ 8ರಂದು ನಡೆದ ಕಾರ್ಯಕ್ರಮದ ಸ್ಕಿಟ್‌ನಲ್ಲಿ ಅಂಬೇಡ್ಕರ್​ ಅವರನ್ನು ಬೀಯರ್ ಅಂಬೇಡ್ಕರ್ ಎಂದು ಅವಹೇಳನ ಮಾಡಲಾಗಿತ್ತು. ಈ ಸ್ಕಿಟ್‌ನಲ್ಲಿ ದಲಿತ ಸಮುದಾಯವನ್ನೂ ಅಪಮಾನಿಸಲಾಗಿತ್ತು. ಈ ಕುರಿತ ವೀಡಿಯೋ ವೈರಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ವಿವಿ ಪ್ರಾಂಶುಪಾಲರು, ಡೀನ್, ಕಾರ್ಯಕ್ರಮ ಆಯೋಜಕರು, ವಿದ್ಯಾರ್ಥಿಗಳು, ಸ್ಕಿಟ್​ ಬರಹಗಾರರ ವಿರುದ್ಧ FIR ದಾಖಲಾಗಿದೆ.

Join Whatsapp