‘ಲೈಂಗಿಕ ಪ್ರಚೋದನಕಾರಿ ಉಡುಗೆ’ ಹೇಳಿಕೆ ವಿವಾದ: ವರ್ಗಾವಣೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ನ್ಯಾಯಾಧೀಶ

Prasthutha|

ಕೊಚ್ಚಿ: ವಿವಾದಾತ್ಮಕ ‘ಲೈಂಗಿಕ ಪ್ರಚೋದನಕಾರಿ ಉಡುಗೆ’ ಹೇಳಿಕೆ ನೀಡಿದ್ದ ನ್ಯಾಯಮೂರ್ತಿ ಎಸ್.ಕೃಷ್ಣಕುಮಾರ್ ಅವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

- Advertisement -

ಉಚ್ಚ ನ್ಯಾಯಾಲಯದ ಆಡಳಿತಾತ್ಮಕ ವಿಭಾಗವು ಹೊರಡಿಸಿದ ವರ್ಗಾವಣೆ ಆದೇಶದ ವಿರುದ್ಧ ಅವರು ಹೈಕೋರ್ಟ್ ಗೆ ದೂರು ನೀಡಿದ್ದಾರೆ.

ಈ ಹೇಳಿಕೆಯ ನಂತರ ಅವರನ್ನು ಕಳೆದ ಮಂಗಳವಾರ ಕೊಲ್ಲಂ ಲೇಬರ್ ನ್ಯಾಯಾಲಯದ ಪೀಠಾಧಿಪತಿ ಸ್ಥಾನಕ್ಕೆ ಸೆಷನ್ಸ್ ನ್ಯಾಯಾಧೀಶರ ಹುದ್ದೆಯಿಂದ ವರ್ಗಾಯಿಸಲಾಗಿತ್ತು.

- Advertisement -

ಆಗಸ್ಟ್ 12 ರಂದು ಕೋಝಿಕ್ಕೋಡ್ ಸೆಷನ್ಸ್ ನ್ಯಾಯಾಲಯದಲ್ಲಿ ಎಸ್ ಕೃಷ್ಣಕುಮಾರ್ ಅವರ ಪೀಠವು ಭಾರತೀಯ ದಂಡ ಸಂಹಿತೆಯ (ಲೈಂಗಿಕ ಕಿರುಕುಳ) ಸೆಕ್ಷನ್ 354 ಎ ಅನ್ನು ಮಹಿಳೆ “ಲೈಂಗಿಕ ಪ್ರಚೋದನಾತ್ಮಕ” ಉಡುಪನ್ನು ಧರಿಸಿದ್ದರೆ ಪರಿಗಣಿಸಲಾಗುವುದಿಲ್ಲ ಎಂದು ತನ್ನ ನಿಲುವನ್ನು ವ್ಯಕ್ತಪಡಿಸಿದ ನಂತರ ವಿವಾದ ಭುಗಿಲೆದ್ದಿತು.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ 74 ವರ್ಷದ ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವಾಗ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

Join Whatsapp