ಸೆಕ್ಸ್ CD ಹಗರಣ | ಸುದ್ದಿಗೋಷ್ಠಿಯಲ್ಲಿ ರಮೇಶ್‌ ಜಾರಕಿಹೊಳಿ ಹೇಳಿದ್ದೇನು?

Prasthutha|

ಬೆಂಗಳೂರು : ಸೆಕ್ಸ್ CD ಹಗರಣಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಅವರು ಈ ಸಿಡಿಯೇ ನಕಲಿ ಎಂದಿದ್ದಾರೆ. ನನ್ನ ರಾಜಕೀಯ ಏಳಿಗೆ ಸಹಿಸದ ಜನರು ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ಈ ಬಗ್ಗೆ ನಾನು ಬಾಲಚಂದ್ರ ಜಾರಕಿಹೊಳಿ ಗಮನಕ್ಕೂ ತಂದಿದ್ದೆ.  ಸಿಡಿ ಬಿಡುಗಡೆಗೂ ಮೊದಲು 26 ಗಂಟೆಯಲ್ಲೇ ಸಿಡಿ ಬಿಡುಗಡೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ನನಗೆ ಪೋನ್ ಮಾಡಿ ತಿಳಿಸಿತ್ತು. ನೀನು ಧೈರ್ಯವಾಗಿರು. ಯಾವುದೇ ಭಯ ಬೇಡ. ಕಾನೂನು ಹೋರಾಟ ಮಾಡೋಣ ಎಂಬುದಾಗಿ ತಿಳಿಸಿತ್ತು. ನಾನು ಈಗಲೂ ಹೇಳುವೆ ಸಿಡಿ 100% ನಕಲಿಯಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಕಲಿ ಸಿಡಿ ಬಿಡುಗಡೆ ಮಾಡಿದವರನ್ನು ಜೈಲಿಗೆ ಹಾಕಿಸದೇ ಬಿಡೋದಿಲ್ಲ ಎಂಬುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ತಿಳಿಸಿದ್ದಾರೆ.

- Advertisement -

ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬಹಳ ದುಖದಲ್ಲಿದ್ದೇನೆ. ಸಿಡಿ ಬಿಡುಗಡೆ ಆಗಿದ್ದ ದಿನವೇ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆ. ನಾನು ತಪ್ಪು ಮಾಡಿದ್ರೇ.. ಆ ತಾಯಿಯೇ ಶಿಕ್ಷೆ ವಿಧಿಸಲಿ.  ರಾತ್ರಿ 9.30ಕ್ಕೆ ಸಿಡಿ ಬಿಡುಗಡೆ ನಂತರ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆಯ ಹಿಂದೆ ಯೋವುದೇ ಒತ್ತಡವಿರಲಿಲ್ಲ ಎಂದರು.

ಈ ಸಿಡಿ ಬಿಡುಗಡೆಯ ಹಿಂದೆ 3 ಜನರ ಷಡ್ಯಂತ್ರವಿದೆ. ಬೆಂಗಳೂರಿನ ಎರಡು ಸ್ಥಳಗಳಲ್ಲಿ ಸಿಡಿ ಬಿಡುಗಡೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಓರಿಯನ್ ಮಾಲ್ ಸಮೀಪ ಹಾಗೂ ಹುಳಿಮಾವಿನಲ್ಲಿರುವ ಅಪಾರ್ಟ್ಮೆಂಟ್ ಗಳಲ್ಲಿ ಸಿಡಿ ಬಿಡುಗಡೆಯ ಷಡ್ಯಂತ್ರ ನಡೆಸಲಾಗಿದೆ. ಸಿಡಿ ಬಿಡುಗಡೆ ಮಾಡಿದ ನಂತರ, ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದು ತಿಳಿಸಿದ್ದಾರೆ.

- Advertisement -

ಹೀಗೆ ಷಡ್ಯಂತ್ರ ಮಾಡಿದವರನ್ನು ಸುಮ್ಮನೇ ಬಿಡೋದಿಲ್ಲ. ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಇಂತಹ ಷಡ್ಯಂತ್ರ ನಡೆದಿದೆ. ಸಿಡಿ 100% ನಕಲಿಯಾಗಿದೆ. ನನಗೆ ಎಲ್ಲಾ ಪಕ್ಷದ ಮೇಲೆ ಗೌರವ ಇದೆ. ಈ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ. ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದೇನೆ. ನನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳುವ ಪ್ರತಿಯೊಂದು ಮಾತಿಗೂ ಬದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

ನನ್ನ ವಿರುದ್ಧದ ನಕಲಿ ಸಿಡಿ ಬಿಡುಗಡೆಯ ಬಗ್ಗೆ ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ. ಒಬ್ಬ ಮಹಾನ್ ವ್ಯಕ್ತಿಗಳ ಕುರಿತಂತೆ ಹೀಗೆಲ್ಲಾ ನಡೆಯೋದು ಸಹಜವಾಗಿದೆ. ನನ್ನನ್ನು ಮುಗಿಸಲು ನೂರಾರು ಕೋಟಿ ಖರ್ಚು ಮಾಡಿ, ಷಡ್ಯಂತ್ರ ರೂಪಿಸಲಾಗಿದೆ. ನನಗೆ ರಾಜಕೀಯ ಇಷ್ಟವಿಲ್ಲ. ನನ್ನ ಕುಟುಂಬವೇ ಮುಖ್ಯ. ಹೀಗಾಗಿ ಸಿಡಿ ಬಿಡುಗಡೆಯಾದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Join Whatsapp