ಭದ್ರತಾ ಸಿಬ್ಬಂದಿಗೆ ಮೆಣಸಿನ ಹುಡಿ ಎರಚಿ ಜೈಲಿನಿಂದ ಏಳು ಖೈದಿಗಳು ಪರಾರಿ!

Prasthutha|

ಗುವಾಹಟಿ: ಜೈಲಿನ ಸಿಬ್ಬಂದಿಗೆ ಹಲ್ಲೆ ನಡೆಸಿ, ಮೆಣಸಿನ ಪುಡಿ ಎರಚಿ ಏಳು ಮಂದಿ ಖೈದಿಗಳು ಜೈಲಿನಿಂದ ಪರಾರಿಯಾದ ಘಟನೆ ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಜೈಲಿನಲ್ಲಿ ನಡೆದಿದೆ.

- Advertisement -

ಜೈಲಿನಿಂದ ಪರಾರಿಯಾದ ಖೈದಿಗಳನ್ನು ಅಭಿಜಿತ್ ಗೊಗೋಯ್, ತಾರೊ ಹಮಾಮ್, ಕಲೋಮ್ ಅಪಾಂಗ್, ತಲುಮ್ ಪನ್ಯಾಂಗ್, ಸುಭಾಶ್ ಮೊಂಡಲ್, ರಾಜ ತಯೆಂಗ್ ಮತ್ತು ದನಿ ಗಮ್ಲಿನಾ ಎಂದು ಗುರುತಿಸಲಾಗಿದೆ. ಈ ಖೈದಿಗಳು ಮೊದಲೇ ಮೆಣಸಿನ ಹುಡಿ ಮತ್ತು ಉಪ್ಪನ್ನು ಸಂಗ್ರಹಿಸಿ ಜೈಲಿನಿಂದ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

ಊಟಕ್ಕಾಗಿ ಸೆಲ್ ತೆರೆದಾಗ ಈ ಏಳು ಮಂದಿ ಭದ್ರತಾ ಸಿಬ್ಬಂದಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

- Advertisement -

ಐದು ಮಂದಿ ಜೈಲು ಸಿಬ್ಬಂದಿಗೆ ಗಾಯಗಳಾಗಿದ್ದು, ಓರ್ವನ ತಲೆಗೆ ಗಂಭೀರವಾಗಿ ಏಟಾಗಿದೆ. ಸಿಬ್ಬಂದಿಯ ಮೊಬೈಲ್ ಫೋನನ್ನು ಕೂಡಾ ಖೈದಿಗಳು ಕೊಂಡೊಯ್ದಿದ್ದಾರೆ. ಪರಾರಿಯಾಗಿರುವ ಖೈದಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Join Whatsapp