ಪ್ರತ್ಯೇಕ ಎರಡು ಅಪಘಾತ; ಇಬ್ಬರು ಸಾವು | ಕಳೆದ 36 ಗಂಟೆಗಳಲ್ಲಿ ನಾಲ್ವರು ದ್ವಿಚಕ್ರ ವಾಹನ ಸವಾರರ ದುರ್ಮರಣ

Prasthutha|

ಮಂಗಳೂರು : ಕರಾವಳಿ ಭಾಗದಲ್ಲಿ ಕಳೆದ 36 ಗಂಟೆಗಳಲ್ಲಿ ನಡೆದ ನಾಲ್ಕು ಪ್ರತ್ಯೇಕ ಅಪಘಾತಗಳಲ್ಲಿ 4 ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ. ಇಂದು ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಸಾವಿಗೀಡಾಗಿದ್ದಾರೆ.  

- Advertisement -

ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ಬೈಕ್ ಹಾಗೂ ಬೊಲೆರೊ ವಾಹನದ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತ ಪಟ್ಟಿದ್ದಾರೆ.

ಮಾಣಿ ಬರಿಮಾರು ನಿವಾಸಿ ಬಾಲಕೃಷ್ಣ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಬೈಕ್ ಹಾಗೂ ಬೊಲೆರೊ ವಾಹನ ವಿಟ್ಲ ಭಾಗದಿಂದ ಉಕ್ಕುಡಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಕಾಶಿಮಠ ಬಳಿ, ಬೊಲೆರೊ ಬೈಕ್ ನ ಹಿಂಭಾಗಕ್ಕೆ ಗುದ್ದಿದೆ. ಇದರಿಂದಾಗಿ ಬೈಕ್ ಸವಾರ ಬಾಲಕೃಷ್ಣ ಅವರು ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸ್ಕೂಟರ್ – ಪಿಕಪ್ ಅಪಘಾತ : ಮೊಟ್ಟೆತಡ್ಕ ಸಮೀಪ ನಡೆದ ಮಹೀಂದ್ರಾ ಪಿಕಪ್ ಮತ್ತು ಟಿವಿಎಸ್ ಜುಪಿಟರ್ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.  

ಸಾಮೆತಡ್ಕ ನಿವಾಸಿ ಪ್ರಸಾದ್ ಅವರು ಅಪಘಾತದಲ್ಲಿ ಮಡಿದವರು. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ನಜ್ಜುಗುಜ್ಜಾಗಿದ್ದು, ಪಿಕಪ್ ಚರಂಡಿಗಿಳಿದಿದೆ.



Join Whatsapp