ಸುಪ್ರೀಂಕೋರ್ಟ್ ಹಿರಿಯ ವಕೀಲ, ಮಾನವ ಹಕ್ಕು ಹೋರಾಟಗಾರ ಇಹ್ತೆಶಾಮ್ ಹಾಶ್ಮಿ ನಿಧನ

Prasthutha|

ನವದೆಹಲಿ: ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಇಹ್ತೆಶಾಮ್ ಹಾಶ್ಮಿ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

- Advertisement -

ಹಲವು ಮಾನವ ಹಕ್ಕುಗಳ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಹಾಶ್ಮಿ ಅವರು ಸಂಘಪರಿವಾರಕ್ಕೆ ಸಿಂಹಸ್ವಪ್ನವಾಗಿದ್ದರು. ತ್ರಿಪುರಾದಲ್ಲಿ 2021ರಲ್ಲಿ ನಡೆದಿದ್ದ ಸರ್ಕಾರಿ ಪ್ರಾಯೋಜಿತ ಕೋಮುಗಲಭೆಯ ಬಗ್ಗೆ ಸತ್ಯಶೋಧನಾ ವರದಿ ತಯಾರಿಸಿ ಬಿಡುಗಡೆ ಮಾಡಿದ್ದರು. ಈ ವರದಿ ಬಿಡುಗಡೆ ಮಾಡಿದ್ದಕ್ಕಾಗಿ ಹಾಶ್ಮಿ ವಿರುದ್ಧ ತ್ರಿಪುರಾ ಸರ್ಕಾರ ಯುಎಪಿಎ ಪ್ರಕರಣ ದಾಖಲಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ಯಾವುದೇ ಕಾರಣಕ್ಕೂ ಹಾಶ್ಮಿ ಅವರನ್ನು ಬಂಧಿಸಬಾರದು ಮತ್ತು ಅವರು ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ಸೂಚಿಸಿತ್ತು.

ಇಂಟರ್ನೆಟ್ ಸ್ಥಗಿತಗೊಳಿಸುವುದನ್ನು “ಅಸಾಂವಿಧಾನಿಕ, ಕಾನೂನುಬಾಹಿರ ” ಎಂದು ಘೋಷಿಸುವಂತೆ ಕೋರಿ ಅವರು ಸುಪ್ರೀಂ ಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಭಾರತದಲ್ಲಿ, ವಿಶೇಷವಾಗಿ ಸಿಎಎ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅನಿಯಂತ್ರಿತ ಇಂಟರ್ನೆಟ್ ಸ್ಥಗಿತವನ್ನು ನಿಲ್ಲಿಸಲು ಅರ್ಜಿಯಲ್ಲಿ ಕೋರಲಾಗಿತ್ತು.

- Advertisement -

ಹಾಶ್ಮಿ ಅವರ ನಿಧನಕ್ಕೆ ಹಿರಿಯ ವಕೀಲರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

Join Whatsapp