ಕಾಂಗ್ರೆಸ್ ತೊರೆದ ಹಿರಿಯ ಮುಖಂಡ ಸಿ.ಆರ್. ಕೇಶವನ್

Prasthutha|

ಚೆನ್ನೈ, ಭಾರತದ ಮಾಜಿ ಗವರ್ನರ್ ಜನರಲ್ ರಾಜಾಜಿ ಅವರ ಮೊಮ್ಮಗ ಮತ್ತು ಕಾಂಗ್ರೆಸ್ ಮುಖಂಡ, ಟಿಎನ್’ಸಿಸಿ ಚಾರಿಟಬಲ್ ಟ್ರಸ್ಟ್’ನ ಟ್ರಸ್ಟಿಗಳಲ್ಲಿ ಒಬ್ಬರಾದ ಸಿ. ಆರ್. ಕೇಶವನ್ ಗುರುವಾರ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.

- Advertisement -


ಅವರು ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ಈ ಘೋಷಣೆ ಮಾಡಿದ್ದಾರೆ.


ತಮ್ಮ ಪತ್ರದಲ್ಲಿ, ಅವರು 2001 ರಲ್ಲಿ ಪಕ್ಷಕ್ಕೆ ಸೇರ್ಪಡೆಯಾದೆ, ಎರಡು ದಶಕಗಳಿಂದ ಪಕ್ಷಕ್ಕಾಗಿ ಸಮರ್ಪಣೆಯಿಂದ ಕೆಲಸ ಮಾಡಲು ನನ್ನನ್ನು ಪ್ರೇರೇಪಿಸಿದ ಮೌಲ್ಯಗಳು ಈಗ ಪಕ್ಷದಲ್ಲಿ ಉಳಿದಿಲ್ಲ. ಇದರಿಂದ ನನಗೆ ನಿಜವಾಗಿಯೂ ದುಃಖವಾಗಿದೆ. ಪಕ್ಷವು ಈಗ ಯಾವುದರ ಪರವಾಗಿ ನಿಲ್ಲುತ್ತದೆ ಅಥವಾ ಪ್ರಚಾರ ಮಾಡಲು ಬಯಸುತ್ತದೆ ಎಂಬುದನ್ನು ನಿಶ್ಚಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.



Join Whatsapp