ವಕ್ಫ್ ಕಾಯ್ದೆ 2024 ಹಿಂಪಡೆಯಲು ಒತ್ತಾಯಿಸಿ ನಾಳೆ ಮಂಗಳೂರಿನಲ್ಲಿ SDPI ಬೃಹತ್ ಪ್ರತಿಭಟನೆ

Prasthutha|

ಮಂಗಳೂರು: ಕೇಂದ್ರ NDA ಸರಕಾರ ಜಾರಿಗೆ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಕಾಯ್ದೆ 2024 ಹಿಂಪಡೆಯಲು ಒತ್ತಾಯಿಸಿ ನಾಳೆ ಮಂಗಳೂರಿನಲ್ಲಿ SDPI ಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.

- Advertisement -

ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ SDPI ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದು ಅದರ ಭಾಗವಾಗಿ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಾಳೆ (12/09/24 ಗುರುವಾರ ) ಸಾಯಂಕಾಲ 4;00 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಸಮೀಪ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಜನಾಂದೋಲನಕ್ಕೆ ನಾಡಿನ ಎಲ್ಲಾ ಸಹೃದಯಿ ನಾಗರಿಕರು ಪಕ್ಷ ಭೇದ ಜಾತಿ ಭೇದ, ಸಂಘಟನಾ ಭೇದ ಮರೆತು ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಕರೆ ನೀಡಿದ್ದಾರೆ.

ವಕ್ಫ್ ತಿದ್ದುಪಡಿ ಕಾಯ್ದೆ 2024 ಅಸಂವಿಧಾನಿಕ ಕಾಯ್ದೆ ಯಾಗಿದೆ. ಮುಸ್ಲಿಂ ಸಮುದಾಯದ ಧಾರ್ಮಿಕ ವಿಚಾರಗಳ ಬಗ್ಗೆ ಬಿಜೆಪಿ ಸರಕಾರದ ಅನಗತ್ಯ ಹಸ್ತಕ್ಷೇಪ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಂಘಪರಿವಾರದ ಹಿಡೆನ್ ಅಜೇಂಡಾದ ಭಾಗವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇಂತಹ ಅವೈಜ್ಞಾನಿಕ ಕಾನೂನುಗಳನ್ನು ಜಾರಿಗೆ ತಂದು ದೇಶದ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದೆ ಮತ್ತು ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ, ಬೆಲೆಯೇರಿಕೆಯ ವಿರುದ್ಧ ಪ್ರಶ್ನಿಸಬೇಕಾದ ಜನರನ್ನು ದಿಕ್ಜುತಪ್ಪಿಸಲು ಇದೊಂದು ವ್ಯವಸ್ಥಿತ ಕಾರ್ಯತಂತ್ರವಾಗಿದೆ ಎಂದು ಎಸ್ ಡಿಪಿಐ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದೆ.

- Advertisement -



Join Whatsapp