ಕುಡಿಯುವ ನೀರಿನ ಸಮಸ್ಯೆ, ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿ ಶಿಸ್ತು ಕ್ರಮಕ್ಕಾಗಿ SDPI ಸುಳ್ಯ ನಿಯೋಗದಿಂದ ಜಿಲ್ಲಾಧಿಕಾರಿಗೆ ಮನವಿ

Prasthutha|

ಸುಳ್ಯ : ಸುಳ್ಯದಲ್ಲಿ ಹಲವಾರು ಸಮಯಗಳಿಂದ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಲೀಟರ್ ನೀರು ಪೋಲಾಗುವುದನ್ನು ತಡೆಗಟ್ಟಿ ಸೂಕ್ತ ಕ್ರಮ ಕೈಗೊಳ್ಳಲು ಸುಳ್ಯದ ನಗರ ಪಂಚಾಯತ್ ಅಧಿಕಾರಿಗಳು ಮತ್ತು ಆಡಳಿತ ವರ್ಗಕ್ಕೆ ಹಲವು ಬಾರಿ ಮನವಿ ಹಾಗೂ ಪ್ರತಿಭಟನೆಗಳ ಮುಖಾಂತರ ಆಗ್ರಹಿಸಿದ್ದರೂ, ಇನ್ನೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಮಾಡಲು ನಿರ್ದೇಶಿಸಬೇಕೆಂದು ಎಸ್.ಡಿ.ಪಿ.ಐ ಸುಳ್ಯ ನಗರ ಸಮಿತಿ ವತಿಯಿಂದ ಜಿಲ್ಲಾಧಿಕಾರಿಯವರ ಅನುಪಸ್ಥಿತಿಯಲ್ಲಿ ಮಂಗಳೂರು ತಹಶಿಲ್ದಾರರಾದ ಶಿವರಾಜ್ ಮುಖಾಂತರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು

- Advertisement -

ಈ ಸಂದರ್ಭದಲ್ಲಿ SDPI ಸುಳ್ಯ ನಗರ ಅಧ್ಯಕ್ಷರಾದ ಅಥಾವುಲ್ಲಾ ಸುಳ್ಯ, ಕಾರ್ಯದರ್ಶಿ ಮೀರಾಝ್ ಸುಳ್ಯ ,ಸುಳ್ಯ ರೂರಲ್ ಬ್ಲಾಕ್ ಅಧ್ಯಕ್ಷರಾದ ಅಬಿದ್ ಪೈಚಾರ್ ಹಾಗೂ ಹಾರಿಸ್ ಕದಿಕಡ್ಕರವರು ಉಪಸ್ಥಿತರಿದ್ದರು.

Join Whatsapp