ಮಲ್ಲೂರು ಗ್ರಾಮದ ಮುಖ್ಯ ರಸ್ತೆಯ ಮರು ಡಾಮರೀಕರಣಕ್ಕಾಗಿ ಜಿಲ್ಲಾಧಿಕಾರಿಗೆ SDPI ಮನವಿ

Prasthutha|

ಮಲ್ಲೂರು: ಮಂಗಳೂರಿನಿಂದ ಮಲ್ಲೂರು ಮಾರ್ಗವಾಗಿ ಬಿ.ಸಿ.ರೋಡಿಗೆ ಹೋಗುವ ಮುಖ್ಯ ರಸ್ತೆ ಬದ್ರಿಯಾನಗರ ಚರ್ಚ್’ನಿಂದ ಮಲ್ಲೂರು ಕುಟ್ಟಿಕಲದವರೆಗೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚರಿಸಲು ಅಯೋಗ್ಯವಾಗಿದೆ. ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮರು ಡಾಮರೀಕರಣಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ.

- Advertisement -

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮಲ್ಲೂರು ಗ್ರಾಮ ಸಮಿತಿ ಅಧ್ಯಕ್ಷ ಶಫೀಕ್ ಮಲ್ಲೂರು, ಕಾರ್ಯದರ್ಶಿ ಅಝರ್ ಬದ್ರಿಯಾನಗರ, ಉಪಾಧ್ಯಕ್ಷ ಸುಫಿಯಾನ್ ಮಲ್ಲೂರು, ಬದ್ರಿಯಾನಗರ ವಾರ್ಡ್ ಕಾರ್ಯದರ್ಶಿ ರಿಯಾಝ್ ಬದ್ರಿಯಾನಗರ ಉಪಸ್ಥಿತರಿದ್ದರು.



Join Whatsapp