ದಿನಬಳಕೆ ಆಹಾರದ ಮೇಲೆ ತೆರಿಗೆ ಹೇರಿಕೆ ಎಸ್ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಾದ್ಯಂತ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ

Prasthutha|

- Advertisement -

ಮೋದಿ ಸರಕಾರದ ಅಸಂಬದ್ಧ ಮತ್ತು ಜನ ವಿರೋಧಿಯಾದ ತೆರಿಗೆ ಹೇರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ವಲಚ್ಚಿಲ್, ಬದ್ರಿಯಾನಗರ, ಉಳಾಯಿಬೆಟ್ಟು, ಅಡ್ಡೂರು, ಗುರುಪುರ ಕ್ಯೆಕಂಬ, ಕಾಟಿಪಳ್ಳ, ಸುರತ್ಕಲ್, ವಾಮಂಜೂರಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.

ಸರಕಾರದ ಜಿ.ಎಸ್.ಟಿ ತೆರಿಗೆಯ ವಿರುದ್ಧ ಭಾರಿ ಘೋಷನೆಗಳನ್ನು ಕೂಗುವುದರ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.

- Advertisement -

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕ್ಷೇತ್ರ ನಾಯಕರಾದ ಯಾಸೀನ್ ಅರ್ಕುಳ, ಇರ್ಫ಼ಾನ್ ಕಾನ, ಸಲಾಂ ಸುರತ್ಕಲ್, ಅಝರ್ ಉಳಾಯಿಬೆಟ್ಟು, ಸಫ಼ೀಕ್ ಬದ್ರಿಯಾನಗರ, ಮುಝಮ್ಮಿಲ್ ನೂಯಿ, ಅಮೀರ್ ಉಳಾಯಿಬೆಟ್ಟು, ಅನ್ವರ್ ಅಡ್ಡೂರು, ಸಮೀರ್ ಕಾಟಿಪಳ್ಳ ರವರು ಮಾತನಾಡಿದರು. ಈ ಸಂಧರ್ಭ ಗ್ರಾಮ ಸಮಿತಿ ನಾಯಕರು, ವಾರ್ಡ್ ಸಮಿತಿ ನಾಯಕರು, ಬೂತ್ ನಾಯಕರು, ಪಂಚಾಯತ್ ಸದಸ್ಯರು, ಕಾರ್ಯಕರ್ತರು, ಹಿತ್ಯೆಸಿಗಳು,ಮತ್ತು ನಾಗರಿಕರು ಉಪಸ್ಥಿತರಿದ್ದರು.



Join Whatsapp