SDPI ವತಿಯಿಂದ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ತರಬೇತಿ ಶಿಬಿರ

Prasthutha|

ಪುತ್ತೂರು : SDPI ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ನಾಲ್ಕನೇ ಹಂತದ ತರಬೇತಿ ಶಿಬಿರವು ಜಿಲ್ಲಾ ಸಮಿತಿಯ ವತಿಯಿಂದ ಇತ್ತೀಚಿಗೆ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು. ಕಾರ್ಯಗಾರದ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪಕ್ಷದ ಜಿಲ್ಲಾ ಉಪಾದ್ಯಕ್ಷರಾದ ಇಕ್ಬಾಲ್ IMR ವಹಿಸಿದ್ದರು. ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಕೆ.ಎ ಸಿದ್ದೀಕ್ ಪುತ್ತೂರು ಪ್ರಾಸ್ತಾವಿಕ ಹಾಗೂ ಸ್ವಾಗತ ಬಾಷಣ ಮಾಡಿದರು.

- Advertisement -


SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳಾದ ಇಲ್ಯಾಸ್ ತುಂಬೆಯವರು ನೂತನ ಸದಸ್ಯರಿಗೆ ಪಕ್ಷದ ಅನಿವಾರ್ಯತೆ ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿ, ಪಕ್ಷದ ಮುಂದಿನ ಕಾರ್ಯಯೋಜನೆಗಳು ಗ್ರಾಮ ಪಂಚಾಯತ್ ಸಧಸ್ಯರುಗಳ  ಜವಬ್ದಾರಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.


ಈ ಕಾರ್ಯಾಗಾರದ ಕೇಂದ್ರ ಬಿಂದು ಹಾಗೂ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಬ್ದುಲ್ ನಝೀರ್ ಸಾಬ್ ಗ್ರಾಮಾಬಿವೃದ್ದಿ ಸಂಸ್ಥೆ ಮೈಸೂರು, ಇದರ ತರಬೇತುದಾರರಾದ ರಾಜ ಹುಣಸೂರು ರವರು ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆ ಸದಸ್ಯರುಗಳ, ಅಧ್ಯಕ್ಷರ ಅಧಿಕಾರ, ವಿಕೇಂದ್ರೀಕರಣದ ಉದ್ದೇಶ, ಕಾಯ್ದೆಗಳು ಪ್ರಕರಣಗಳು, ಅಧಿನಿಯಮಗಳು ಹಾಗೂ ಇವೆಲ್ಲವನ್ನು ಕೈಗೊಳ್ಳುವ, ಜಾರಿಗೆ ತರುವ ವಿಚಾರಗಳ ಬಗ್ಗೆ ಸುದೀರ್ಘವಾಗಿ ತರಬೇತಿ ನಡೆಸಿ ಕೊಟ್ಟರು.

- Advertisement -


ರಾಜ್ಯ ಸಮಿತಿ ಸದಸ್ಯರಾದ ಇಕ್ಬಾಲ್ ಬೆಳ್ಳಾರೆಯವರು ಶಿಬಿರಾರ್ಥಿಗಳಿಗೆ  ಮೈಂಡ್ ಮ್ಯಾಪಿಂಗ್ ತರಬೇತಿ ನೀಡಿದರು. ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಮಾದರಿ ಗ್ರಾಮ ಪಂಚಾಯತ್ ಬಗ್ಗೆ ವಿಚಾರ ಮಂಡಿಸಿದರು. ಏಕದಿನ ಕಾರ್ಯಾಗಾರದಲ್ಲಿ ಪುತ್ತೂರು, ಸುಳ್ಯ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಸದಸ್ಯರುಗಳು ಬಾಗವಹಿಸಿದರು. ನಿರೂಪಣೆ ಹಾಗೂ ಧನ್ಯವಾದ ಸಮರ್ಪಣೆಯನ್ನು ಜಿಲ್ಲಾ ಸಮಿತಿ ಸದಸ್ಯರಾದ ಖಾದರ್ ಫರಂಗಿಪೇಟೆ ನೆರವೇರಿಸಿದರು

Join Whatsapp