ವಿಟ್ಲ: ಸಮಾಜ ಘಾತುಕ ಶಕ್ತಿಗಳಿಂದ ಎಸ್.ಡಿ.ಪಿ.ಐ ಕಚೇರಿಗೆ ಬೆಂಕಿ

Prasthutha|

► ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಸಾಧನೆ ಸಹಿಸದ ಶಕ್ತಿಗಳಿಂದ ಕೃತ್ಯ: ಎಸ್.ಡಿ.ಪಿ.ಐ

- Advertisement -

ವಿಟ್ಲ: ಎಸ್.ಡಿ.ಪಿ.ಐ ವಿಟ್ಲ ವಲಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ವಿಟ್ಲದ ಮೆಗಿನಪೇಟೆಯಲ್ಲಿ ನಡೆದಿದೆ.

ಸೋಮವಾರದಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಪೈಂಟ್ ಮತ್ತು ಪೆಟ್ರೋಲ್  ಸುರಿದು ಬೆಂಕಿ ಹಾಕಲಾಗಿದೆ ಎಂದು ಅನುಮಾನಿಸಲಾಗಿದೆ.

- Advertisement -

ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಸಂಘಪರಿವಾರದ ಕಾರ್ಯಕರ್ತ ಕಲ್ಲಡ್ಕದ ಅಕ್ಷಯ್ ರಜಪೂತ್ ಎಂಬಾತ ಎಸ್.ಡಿ.ಪಿ.ಐ ಕಚೇರಿಗೆ ಯಾಕಾಗಿ ಬೆಂಕಿ ಹಾಕಬಾರದು ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಎಂದು ವಿಟ್ಲದಲ್ಲಿ ಸ್ಥಳೀಯರು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಸ್.ಡಿ.ಪಿ.ಐ ಸ್ಥಳಿಯ ನಾಯಕ ಶಾಕಿರ್ ಅಳಕೆ ಮಜಲು, ಜಿಲ್ಲೆಯಲ್ಲಿ ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಸಾಧನೆಯನ್ನು ಕಂಡು ಸಹಿಸದ ಶಕ್ತಿಗಳು ಈ ಕೃತ್ಯವನ್ನು ಮಾಡಿದೆ ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಕಿರ್ ಅಳಕೆ ಮಜಲು ಹೇಳಿದ್ದಾರೆ.

ಪೊಲೀಸರು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಅದಕ್ಕೆ ವಿಫಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Join Whatsapp