SDPI ನೂತನ ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು ಆಯ್ಕೆ

Prasthutha|

ಬೆಂಗಳೂರು : ಎಸ್ ಡಿಪಿಐ ಪಕ್ಷದ 2021-24 ನೇ ಸಾಲಿನ ನೂತನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಎಸ್ ಡಿಪಿಐ ರಾಜ್ಯ ಪ್ರತಿನಿಧಿ ಸಭೆಯಲ್ಲಿ ನೂತನ ಕರ್ನಾಟಕ ಪ್ರತಿನಿಧಿಗಳ ಆಯ್ಕೆ ನಡೆಯಿತು.

- Advertisement -

ಉಪಾಧ್ಯಕ್ಷರಾಗಿ ಪ್ರೊ.ಸಾದಿಯಾ ಸೈದಾ ಗುಲ್ಬರ್ಗಾ, ನಿವೃತ್ತ DDPI ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಪುತ್ತೂರು, ಬಾಸ್ಕರ್ ಪ್ರಸಾದ್ ನೆಲಮಂಗಲ, ಅಫ್ಸರ್ ಕೊಡ್ಲಿಪೇಟೆ, ಕಾರ್ಯದರ್ಶಿಗಳಾಗಿ ಅಶ್ರಫ್ ಮಾಚಾರ್, ಶಾಫಿ ಬೆಳ್ಳಾರೆ ಮತ್ತು ಆನಂದ್ ಮಿತ್ತಬೈಲು, ಕೋಶಾಧಿಕಾರಿಯಾಗಿ ಖಾಲಿದ್ ಹುಸೈನ್ ಯಾದ್ ಗಿರಿ ಆಯ್ಕೆಯಾಗಿದ್ದಾರೆ.

ರಾಜ್ಯ ಸಮಿತಿ ಸದಸ್ಯರಾಗಿ ಅಬ್ದುಲ್ ಹನ್ನಾನ್, ಅಬ್ದುಲ್ ಜಲೀಲ್ ಕೆ, ಮುಜಾಹೀದ್ ಪಾಷಾ ಬೆಂಗಳೂರು,ಆಲ್ಫಾನ್ಸೋ ಫ್ರಾಂಕೋ, ನೂರುದ್ದೀನ್ ಮೌಲಾನಾ ಮೈಸೂರು, ಮೆಹಬೂಬ್ ಸಾಹೇಬ್ ಮುಲ್ಲ, ರಿಯಾಝ್ ಕಡಂಬು, ಪ್ರೊ ಸಯ್ಯದ್ ಗಯಾಸುದ್ದೀನ್ ವಿಜಯನಗರ, ಅಥಾವುಲ್ಲಾ ಜೋಕಟ್ಟೆ, ಇಬ್ರಾಹಿಂ ಮಜೀದ್ ತುಂಬೆ, ಸಲೀಂ ಶಿವಮೊಗ್ಗ, ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್, ಅಮ್ಜದ್ ಮೈಸೂರ್,ರಫೀಕ್, ಝೀನತ್ ಬಂಟ್ವಾಳ,ಪ್ರೊ ನಝ್ನೀಂ ಬೇಗಂ,ರಹೀಮ್ ಪಟೇಲ್,ಸಲೀಂ ಖಾನ್ ಆಯ್ಕೆಯಾಗಿದ್ದಾರೆ



Join Whatsapp