ಪ್ರವಾದಿ ನಿಂದನೆ ಮಾಡಿ ಗಲಭೆಗೆ ಪ್ರಚೋದಿಸಿದವನ ಪರ ಪ್ರಚಾರ ಮಾಡಲು ನಾಚಿಕೆಯಾಗುವುದಿಲ್ಲವೇ?: ಶಾಸಕ ಜಮೀರ್‌ಗೆ ಅಫ್ಸರ್ ಕೊಡ್ಲಿಪೇಟೆ ಪ್ರಶ್ನೆ

Prasthutha|

ಬೆಂಗಳೂರು: ಮುಸ್ಲಿಮರ ಪ್ರವಾದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿ ಗಲಭೆಗೆ ಪ್ರಚೋದಿಸಿದವನ ಪರ ಪ್ರಚಾರ ಮಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು ಶಾಸಕ ಜಮೀರ್ ಅಹ್ಮದ್ ಗೆ ಪ್ರಶ್ನೆ ಮಾಡಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಸೋದರಳಿಯ ನವೀನ್ ಎಂಬಾತ ಮುಸ್ಲಿಮರ ಪ್ರವಾದಿ ಯವರ ಬಗ್ಗೆ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್‌ ಹಾಕಿ ಮುಸ್ಲಿಮರನ್ನು ಪ್ರಚೋದಿಸಿ ಗಲಭೆ ಮಾಡಿ 4 ಅಮಾಯಕ ಜೀವ ಬಲಿಪಡೆದು 200 ಕ್ಕಿಂತ ಹೆಚ್ಚು ಯುವಕರ ಮೇಲೆ UAPA ಎಂಬ ಕರಾಳ ಕಾಯ್ದೆಗೆ ಕಾರಣವಾದವನ ಪರ ಚುನಾವಣಾ ಪ್ರಚಾರ ಮಾಡಲು ನಾಚಿಕೆ ಯಾಗುವುದಿಲ್ಲವೇ? ಎಂದು ಕೇಳಿದ್ದಾರೆ.

Join Whatsapp