ಉಳ್ಳಾಲದಲ್ಲಿ ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆ: ಧ್ವಜಾರೋಹಣ

Prasthutha|

ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಉಳ್ಳಾಲ ನಗರ ಸಮಿತಿ ಕಚೇರಿ ಮುಂಭಾಗದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜಿನಡ್ಕ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಾಹೀದ್ ಮಲಾರ್ ಮಾತನಾಡಿದರು. ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಎ. ಆರ್. ಅಬ್ಬಾಸ್ ಸ್ವಾಗತ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಸಂದೇಶ ಭಾಷಣ ಮಾಡಿದರು.

- Advertisement -


ಮುಖ್ಯ ಅತಿಥಿ ಭಾಷಣದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆ.ಸಿ. ರೋಡ್, ಝಾಕೀರ್ ಉಳ್ಳಾಲ ಪಕ್ಷದ ಧ್ಯೇಯ ಧೋರಣೆ ಮತ್ತು ಪ್ರಸಕ್ತ ರಾಜಕೀಯ ವಿಚಾರಗಳ ಬಗ್ಗೆ ಮಾತಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೋಶಾಧಿಕಾರಿ ಐ ಯಂ ಆರ್ ಇಕ್ಬಾಲ್ ನವಾಜ್ ಉಳ್ಳಾಲ್ ವಿಧಾನಸಭಾ ಸಮಿತಿ ಜತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಕೋಶಾಧಿಕಾರಿ ಲತೀಫ್ ಕೋಡಿಜಾಲ್ ವಿಧಾನಸಭಾ ಸಮಿತಿ ಸದಸ್ಯ ಅಬ್ಬಾಸ್ ಕಿನ್ಯ, ಪಾವೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಉಳ್ಳಾಲ ನಗರ ಸಮಿತಿ ಉಪಾದ್ಯಕ್ಷ ಇಮ್ತಿಯಾಝ್ ಕೋಟೆಪುರ ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್ ಕೋಶಾಧಿಕಾರಿ ಇಮ್ತಿಯಾಜ್ ಮುಕ್ಕಚೇರಿ ಉಳ್ಳಾಲ ನಗರ ಸಭಾ ಸದಸ್ಯ ಅಸ್ಗರ್ ಅಲಿ ರಮೀಜ್ ಕೋಡಿ ರವೂಫ್ ಹಳೆಕೋಟೆ, ನಿಝಾಮ್ ಮೇಲಂಗಡಿ ಇಕ್ಬಾಲ್ ಕೋಟೆಪುರ ಉಪಸ್ಥಿತರಿದ್ದರು ಸಾದಿಕ್ ಯು.ಬಿ.ಧನ್ಯವಾದ ಸಮರ್ಪಿಸಿದರು.

Join Whatsapp