ಸುರತ್ಕಲ್ ವೃತ್ತಕ್ಕೆ ಕೋಟಿ – ಚೆನ್ನಯ್ಯ ಹೆಸರು ನಾಮಕರಣಕ್ಕೆ ಎಸ್’ಡಿಪಿಐ ಒತ್ತಾಯ

Prasthutha|

ಮಂಗಳೂರು: ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯರವರ ಹೆಸರು ನಾಮಕರಣ ಮಾಡಬೇಕು ಎಂದು SDPI ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಯಾಸೀನ್ ಆಗ್ರಹಿಸಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸುರತ್ಕಲ್ ಭಾಗದ ಸರ್ವ ಸಮುದಾಯದ ಜನರು ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯರವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಮೊದಲು ಡಿಸಿಯವರಿಗೆ ಮತ್ತು ಮಂಗಳೂರು ಪಾಲಿಕೆಗೆ ಈ ಸಂಬಂಧ ಮನವಿ ಮಾಡಲಾಗಿತ್ತು. ನಾಲ್ಕು ವರ್ಷಗಳಲ್ಲಿ ಈ ಭಾಗದ ಜನರಿಗೆ ಸಿಗದ ಶಾಸಕ ಭರತ್ ಶೆಟ್ಟಿಯವರು  ಚುನಾವಣಾ ಹತ್ತಿರ ಬರುವಾಗ ಪ್ರತ್ಯಕ್ಷರಾಗಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಚುನಾವಣೆಗಾಗಿ ಧರ್ಮ ಧಂಗಲ್ ಮಾಡುವವರನ್ನು ಈ ಬಾರಿ ಕ್ಷೇತ್ರದ ಜನರು ಸೋಲಿಸುವುದು ಖಚಿತ ಎಂದು ಯಾಸೀನ್ ತಿಳಿಸಿದ್ದಾರೆ.

Join Whatsapp