ಅಬೂಬಕ್ಕರ್ ಹಾಜಿ (ಕೋಟ್ಯಾಜಾರ್) ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಎಸ್‌ ಡಿಪಿಐ ಸಂತಾಪ

Prasthutha|

ಮಂಗಳೂರು: ದೇರಳಕಟ್ಟೆ ನಿವಾಸಿಯಾದ ಅಬೂಬಕ್ಕರ್ ಹಾಜಿ (ಕೋಟ್ಯಾಜಾರ್) ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಎಸ್‌ಡಿಪಿಐ ಬೆಲ್ಮ ಗ್ರಾಮಸಮಿತಿ ಅಧ್ಯಕ್ಷ ಅಶ್ರಫ್ ಡಿ.ಎ ತಿಳಿಸಿದ್ದಾರೆ.

- Advertisement -

ದೇರಳಕಟ್ಟೆ ನಿವಾಸಿ, ಉದ್ಯಮಿ ಅಬೂಬಕ್ಕರ್ ಹಾಜಿ (ಕೋಟ್ಯಾಜಾರ್) ಅವರು ಶನಿವಾರ ತಡರಾತ್ರಿ ನಿಧನರಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಸಮಿತಿಯ ಅಧ್ಯಕ್ಷ ಆಶ್ರಫ್ ಡಿ.ಎ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೋಟ್ಯಾಜಾರ್ ಎಂದೇ ಪ್ರಖ್ಯಾತರಾದ ಅಬೂಬಕ್ಕರ್ ಹಾಜಿ ದೇರಳಕಟ್ಟೆ ಅವರು ಕೊಡುಗೈ ಧಾನಿಯಾಗಿದ್ದು, ಹಲವು ನಿರ್ಗತಿಕರ ಕಣ್ಣೀರನ್ನು ಒರೆಸಿದ್ದಾರೆ. ಸದ್ಯ ಅವರು ಇಹಲೋಕ ತ್ಯಜಿಸಿದ್ದು, ಅವರ ಮಗಫಿರತ್’ಗಾಗಿ ಪ್ರಾರ್ಥಿಸುವಂತೆ ಕೋರಿದ್ದಾರೆ.

- Advertisement -

ಅವರ ಅಗಳುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನ ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp