ಸಯ್ಯದ್ ಆಲವಿ ತಂಙಳ್ ನಿಧನಕ್ಕೆ SDPI ಸಂತಾಪ

Prasthutha|

ಮಂಗಳೂರು: ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಸಯ್ಯದ್ ತ್ವಾಹಾ ತಂಙಳ್ ರವರ ತಂದೆ ಸಯ್ಯದ್ ಅಲವಿ ತಂಙಳ್ ನಿಧನರಾಗಿದ್ದು, ಧಾರ್ಮಿಕ ನೇತಾರರಾಗಿದ್ದುಕೊಂಡು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಗೌರವಕ್ಕೆ ಪಾತ್ರರಾಗಿದ್ದ ಇವರ ವಿಯೋಗವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೊಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ವಿವಿಧ ಕಡೆಗಳಲ್ಲಿ ಅಪಾರ ಶಿಷ್ಯ ವೃಂದ, ಅನುಯಾಯಿಗಳು ಹೊಂದಿದ್ದ ಇವರು ಧಾರ್ಮಿಕ ರಂಗದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಸೃಷ್ಟಿಕರ್ತನು ಅವರ ಕುಟುಂಬಕ್ಕೆ ಮತ್ತು ಅನುಯಾಯಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ಹಾಗೂ ಅವರ ಪಾರತ್ರಿಕ ಜೀವನವು ಶಾಂತಿಯಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.



Join Whatsapp