ಹಾಜಿ ಇಸ್ಮಾಯೀಲ್ ಸಾಹೇಬ್ ನಿಧನಕ್ಕೆ ಎಸ್ ಡಿಪಿಐ ಸಂತಾಪ

Prasthutha|

ಉಡುಪಿ: ತೋನ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಸಾಮಾಜಿಕ ಮುಂದಾಳು ಬೈಕಾಡಿ ಹಾಜಿ ಇಸ್ಮಾಯೀಲ್ ಸಾಹೇಬ್ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್ ಡಿಪಿಐ ತೀವ್ರ ಸಂತಾಪ ವ್ಯಕ್ತಪಡಿಸಿದೆ.

- Advertisement -

ಹೂಡೆಯ ಖಾದಿಮ್ ಜಾಮೀಯಾ ಮಸೀದಿಯ ಅಧ್ಯಕ್ಷರಾಗಿ, ದಾರುಸ್ಸಲಾಂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಅವರು ಶ್ರಮಿಸಿದ್ದಾರೆ.   ಹಲವಾರು ಸಂಘ ಸಂಸ್ಥೆಗಳಲ್ಲಿ  ಸಕ್ರಿಯವಾಗಿ ತೊಡಗಿಕೊಂಡು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಾಬ್ ಬೈಕಾಡಿ ಇಸ್ಮಾಯಿಲ್ ಸಾಹೇಬ್ ರವರ ನಿಧನಕ್ಕೆ ಎಸ್.ಡಿ.ಪಿ‌.ಐ.ಪಡುತೋನ್ಸೆ ಗ್ರಾಮ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp