ಸಿದ್ದರಾಮಯ್ಯನವರ ವಾಹನದ ಮೇಲೆ ಮಹಿಳೆ ಹಣ ಎಸೆದಿರುವುದರ ಹಿಂದೆ SDPI ಕೈವಾಡ: ವಿಜಯಾನಂದ ಕಾಶಪ್ಪನವರ್

Prasthutha|

- Advertisement -

ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನೀಡಿದ ಹಣವನ್ನು ಮಹಿಳೆಯೊರ್ವರು ಅವರ ಬೆಂಗಾವಲು ವಾಹನಕ್ಕೆ ಎಸೆದಿರುವುದರ ಹಿಂದೆ ಎಸ್ ಡಿಪಿಐ ಕೈವಾಡವಿದೆ ಎಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ಆರೋಪಿಸಿದ್ದಾರೆ.

ಇಳಕಲ್ ನಲ್ಲಿ ಮಾತನಾಡಿದ ಅವರು, ನಾನೂ ನಿನ್ನೆ ಸಿದ್ದರಾಮಯ್ಯ ಜೊತೆಗಿದ್ದೆ. ಅಲ್ಲಿ ಎಸ್ ಡಿಪಿಐ ವ್ಯಕ್ತಿಯೊಬ್ಬನನ್ನು ನೋಡಿದ್ದೇನೆ. ಮಹಿಳೆ ಹಣ ಎಸೆಯಲು ಆತನೇ ಪ್ರೇರಣೆ ನೀಡಿದ್ದಾನೆ. ಅಲ್ಲದೆ ಘಟನೆ ಹಿಂದೆ ಎಸ್ ಡಿಪಿಐ ಕೈವಾಡವಿದೆ ಎಂದರು.

- Advertisement -

ಗಾಯಾಳುಗಳೆಲ್ಲರು ಸಿದ್ದರಾಮಯ್ಯ ನವರೊಂದಿಗೆ ಉತ್ತಮವಾಗಿ ಮಾತನಾಡಿದರು‌.ನಿನ್ನೆ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರು ನೀಡಿದ್ದ ಎರಡು ಲಕ್ಷ ರೂ. ಪರಿಹಾರ ಹಣವನ್ನು ತೀರಸ್ಕರಿಸಿ ಮುಸ್ಲಿಂ ಮಹಿಳೆ ಸಿದ್ದರಾಮಯ್ಯ ಅವರ ವಾಹನದ ಕಡೆಗೆ ಎಸೆದಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಯಾಗಿತ್ತು

Join Whatsapp