ಉ.ಪ್ರ ಚುನಾವಣೆಗೂ ಮುನ್ನ ಸುಗಂಧ ದ್ರವ್ಯ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

Prasthutha|

►“ಸಮಾಜವಾದದ ಪರಿಮಳ ಎಲ್ಲೆಡೆ ಹರಡಲಿ” ಎಂದ ಪಕ್ಷ

- Advertisement -


ಲಕ್ನೋ: ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ಸುಗಂಧ ದ್ರವ್ಯ ಬಿಡುಗಡೆ ಮಾಡಿದೆ.

ಕನ್ನೌಟ್ ಕ್ಷೇತ್ರದ MLC ಪಮ್ಮಿ ಜೈನ್ ಅವರು ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದರು. ಕೆಂಪು ಮತ್ತು ಹಸಿರು ಬಣ್ಣದ ಬಾಟಲಿಯಲ್ಲಿ ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರ ಚಿತ್ರ ಮತ್ತು ಪಕ್ಷದ ಸೈಕಲ್ ಚಿಹ್ನೆ ಇದೆ.

- Advertisement -

ಜನರು ಸುಗಂಧ ದ್ರವ್ಯವನ್ನು ಬಳಸುತ್ತಿದ್ದಂತೆಯೇ ಸಮಾಜವಾದದ ಪರಿಮಳವು ದೇಶದಲ್ಲಿ ಹರಡಲಿದೆ ಎಂದು ಜೈನ್ ಹೇಳುತ್ತಾರೆ. ಈ ಸುಗಂಧವು 2022 ರಲ್ಲಿ ದ್ವೇಷವನ್ನು ತೊಡೆದುಹಾಕಲಿದೆ ಎಂಬುದು ಅವರ ಅಭಿಪ್ರಾಯ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸಣ್ಣ ಪಕ್ಷಗಳೊಂದಿಗೆ ಮಾತ್ರ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಅಖಿಲೇಶ್ ಹೇಳಿದ್ದರು.



Join Whatsapp