ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಜಮೀಯತ್-ಉಲಮಾ-ಇ-ಹಿಂದ್ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದೆ ರಾಜ್ಯದಲ್ಲಿ ಆಸ್ತಿಗಳ ನೆಲಸಮವನ್ನು ನಡೆಸದಂತೆ ನೋಡಿಕೊಳ್ಳಲು ಉತ್ತರ ಪ್ರದೇಶದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಜಮಿಯತ್-ಉಲೇಮಾ-ಇ-ಹಿಂದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಜುಲೈ 13 ಕ್ಕೆ ಮುಂದೂಡಿದೆ.

- Advertisement -

ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೆಬಿ ಪರ್ಡಿವಾಲಾ ಅವರ ರಜಾಕಾಲದ ನ್ಯಾಯಪೀಠವು ಬುಧವಾರ ವಿಚಾರಣೆಯನ್ನು ಮುಂದೂಡಿತು, ಬಾಧಿತ ಪಕ್ಷವು ಈಗಾಗಲೇ ಅಲಹಾಬಾದ್ ಹೈಕೋರ್ಟ್ ಗೆ ತೆರಳಿದೆ ಮತ್ತು ಈ ವಿಷಯವನ್ನು ನಿನ್ನೆ ಮತ್ತು ನಾಳೆಯೂ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಮತ್ತು ಬಾಧಿತ ಪಕ್ಷ / ಜಾವೇದ್ ಮೊಹಮ್ಮದ್ ಅವರ ಪತ್ನಿ ಪರ್ವೀನ್ ಫಾತಿಮಾ ಅವರು ತಮ್ಮದೇ ಆದ ಪ್ರಕರಣವನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ಡಿವಾಲಾ ಅವರ ರಜಾಕಾಲದ ಪೀಠಕ್ಕೆ ಮಾಹಿತಿ ನೀಡಿದ್ದರು

ಅರ್ಜಿದಾರರ ಪರ ವಕೀಲೆ ನಿತ್ಯಾ ರಾಮಕೃಷ್ಣನ್ ಅವರು ಎಸ್ಜಿ ಅವರ ಮನವಿಯನ್ನು ವಿರೋಧಿಸದ ಕಾರಣ, ನ್ಯಾಯಪೀಠವು ಪ್ರಕರಣವನ್ನು ಜುಲೈ 13 ಕ್ಕೆ ಮುಂದೂಡಿತು.

Join Whatsapp