ಸವಣೂರು ಗ್ರಾಮ ಸಭೆ: ಸರ್ಕಾರಿ ಕೆರೆಯಾಗಿರುವ ಕಂಚಿಕೆರೆ ಒತ್ತುವರಿ ತೆರವಿಗೆ ಸದಸ್ಯರ ಪ್ರತಿಭಟನೆ

Prasthutha|

ಪುತ್ತೂರು: ಸವಣೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಸರ್ಕಾರಿ ಕೆರೆಯಾಗಿರುವ ಕಂಚಿಕೆರೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಈ ಜಾಗವನ್ನು ಪಂಚಾಯಿತಿಗೆ ಸೇರಿಸಬೇಕೆಂದು ನಿರ್ಣಯ ಕೈಗೊಂಡು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಯಾವುದೇ ಅಧಿಕಾರಿಯೂ ಭೇಟಿ ನೀಡಲಿಲ್ಲ. ಹಾಗಾಗಿ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಸ್ ಡಿಪಿಐ ಬೆಂಬಲಿತ ಗ್ರಾಮ ಪಂಚಾಯಿತಿಯ ಸದಸ್ಯ ಎಂ.ಎ ರಫೀಕ್  ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಇಂದು ಪ್ರತಿಭಟನೆ ಮಾಡಿದರು.

- Advertisement -

 ಸ್ಥಳಕ್ಕೆ ತಹಶೀಲ್ದಾರರು ಆಗಮಿಸಿ ಮುಂದಿನ ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.

ಈ ಸಮಸ್ಯೆಯನ್ನು ಬಗೆಹರಿಸುವ ತನಕ ಸಭೆ ನಡೆಯಬಾರದು ಎಂದು ಹಠಹಿಡಿದ ಸದಸ್ಯರ ಬೇಡಿಕೆಯಂತೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

Join Whatsapp