ಮಸೀದಿಯ ಮುಂದೆ ಸಂಘಪರಿವಾರದ ದುರ್ವರ್ತನೆ: ನಿಯಮ ಉಲ್ಲಂಘಿಸಿ ಡಿಜೆ ಹಾಕಿದ ನಾಲ್ವರ ವಿರುದ್ಧ FIR

Prasthutha|

ಗುಲ್ಬರ್ಗಾ: ಇಲ್ಲಿನ ಮೆಹಬೂಸ್ ಮಸೀದಿಯ ಮುಂಭಾಗದಲ್ಲಿ ಗಣೇಶ ಚತುರ್ಥಿ ಮೆರವಣಿಗೆಯಲ್ಲಿ ಜೋರಾಗಿ ಧ್ವನಿವರ್ಧಕ ಬಳಸಿ ನಿಯಮ ಉಲ್ಲಂಘಿಸಿದ್ದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಡಿಜೆ ಮತ್ತು ಕಾರ್ಯಕ್ರಮದ ಆಯೋಜಕರು ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

- Advertisement -

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ “ಖೂನ್ ಸೆ ಇಸ್ ಧರ್ತಿ ಕೋ ಹಮ್ ನೆಹ್ಲಾಯೇಂಗೆ, ಹಮ್ ತುಝ್ಕೊ ತೇರಿ ಅವ್ಕಾತ್ ಬತಾಯೆಂಗೆ ” ಎಂಬ ಹಾಡನ್ನು ಮೆಹಬೂಸ್ ಮಸೀದಿಯ ಮುಂಭಾಗದಲ್ಲಿ ನುಡಿಸುವುದನ್ನು ನೋಡಬಹುದಾಗಿದೆ.

ಕಾರ್ಯಕ್ರಮದ ಆಯೋಜಕರಾದ ಬಿಜೆಪಿ ನಾಯಕ ಚಂದು ಪಾಟೀಲ್ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಧ್ವನಿವರ್ಧಕದಲ್ಲಿ ಡಿಜೆಗಳನ್ನು ನುಡಿಸಲು ಸವಾಲು ಹಾಕಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಕಲಬುರ್ಗಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Join Whatsapp