ಸಾಲೆತ್ತೂರು: “ಅಂಧಕಾರದಿಂದ ಪ್ರಕಾಶದೆಡೆಗೆ” ಕಾರ್ಯಕ್ರಮ

Prasthutha|

ಸಾಲೆತ್ತೂರು: ಸೌತ್ ಕರ್ನಾಟಕ ಸಲಫಿ ಮೂವ್’ಮೆಂಟ್(SKSM) ಇದರ ಸಾಲೆತ್ತೂರು  ಘಟಕ ಆಯೋಜಿಸಿದ “ಅಂಧಕಾರದಿಂದ ಪ್ರಕಾಶದೆಡೆಗೆ” ಎಂಬ ಧ್ಯೇಯ ವಾಕ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವು ಮಗ್ರೀಬ್ ನಮಾಝ್ ನ ಬಳಿಕ ಸಾಲೆತ್ತೂರು ಸಲಫಿ ಮಸೀದಿ ಮುಂಭಾಗದಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದಲ್ಲಿ ಮುಹಮ್ಮದ್ ಸುಹೈಲ್ ಕಿರಾಅತ್ ಪಠಿಸಿದರು. ಅಬ್ದುಲ್ ಮುನೀರ್ ಬಜಾಲ್ ಅತಿಥಿಗಳನ್ನು ಸ್ವಾಗತಿಸಿದರು. ಶಿಹಾಬ್ ತಲಪಾಡಿ ಪ್ರಾಸ್ತಾವಿಕ ಪ್ರವಚನ ನೀಡಿದರು. SKSM ನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಬಶೀರ್ ಅ‌ಹಮದ್ ಶಾಲಿಮಾರ್ ರವರು ಅಲ್ಲಾಹನ ಏಕದೇವ ಸಂದೇಶವನ್ನು ಸಾರೋಣ ಎಂದು ಶುಭ ಹಾರೈಸಿದರು. ಉಸ್ತಾದ್ ಮುಸ್ತಫಾ ದಾರಿಮಿಯವರು ತೌಹೀದ್ ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ ಮತ್ತು ಮೌಲವಿ ಸಲಾವುದ್ದೀನ್ ಯವರು ಲಾ ಇಲಾಹ ಇಲ್ಲಲ್ಲಾಹ್   ಎಂಬ  ವಿಷಯದಲ್ಲಿ ಪ್ರವಚನ ನೀಡಿದರು.

ವೇದಿಕೆಯಲ್ಲಿ ಬಶೀರ್ ಅಹ್ಮದ್ ಶಾಲಿಮಾರ್, ಅಬ್ದುಲ್ ರಹಿಮಾನ್ ಉಪ್ಪಿನಂಗಡಿ ರಿಯಾಝ್ ಅಹಮದ್, ಅಬ್ದುಲ್ ಸತ್ತಾರ್ ಆಸ್ಕೊ, ಅಬ್ದುಲ್ ರಹೀಂ ಬಿ.ಸಿ.ರೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

Join Whatsapp