ಗೋವುಗಳ ಪೋಷಣೆಗೆ ವೇತನ ಕಡಿತ| ಸರ್ಕಾರಿ ನೌಕರರ ಆಕ್ಷೇಪ

Prasthutha|

ಬೆಂಗಳೂರು: ಗೋಶಾಲೆಯಲ್ಲಿ ಗೋವುಗಳನ್ನು ಸಾಕಲು ’ಪುಣ್ಯಕೋಟಿ ದತ್ತು ಯೋಜನೆ’ ಗೆ ನೌಕರರ ವೇತನದಿಂದ ದೇಣಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದ್ದು, ನೌಕರರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

- Advertisement -

‘ಡಿ’ ವೃಂದದ ನೌಕರರನ್ನು ಬಿಟ್ಟು, ಇತರ ವೃಂದಗಳ, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ ತಿಂಗಳ ವೇತನದಿಂದ ನಿರ್ದಿಷ್ಟ ಮೊತ್ತ ಕಡಿತವಾಗಲಿದೆ.

‘ಎ’ ವೃಂದದ ನೌಕರರಿಂದ 11,000, ‘ಬಿ’ ವೃಂದದ ನೌಕರರಿಂದ 4,000, ‘ಸಿ’ ವೃಂದದ ನೌಕರರಿಂದ 400 ರೂ ಸರ್ಕಾರ ಕಡಿತಗೊಳಿಸಲಿದೆ.

- Advertisement -

ಆದರೆ ಸರ್ಕಾರದ ಮಂಜೂರಾತಿಗೆ ನೌಕರರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

Join Whatsapp