ದೇಶದಲ್ಲಿರುವ ಪ್ರತಿಯೊಬ್ಬ SDPI ಕಾರ್ಯಕರ್ತರಿಗೂ ಸ್ಫೂರ್ತಿ ನೀಡುವ ಗ್ರಾಮವಾಗಿದೆ ಸಜೀಪನಡು: ಅಶ್ರಫ್ ಬಡಾಜೆ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಜೀಪನಡು ಗ್ರಾಮ ಸಮಿತಿಯ ಕಾರ್ಯಕರ್ತರ ಸಮಾವೇಶ ಗ್ರಾಮ ಸಮಿತಿ ಅಧ್ಯಕ್ಷ ನೌಶಾದ್ ಅಧ್ಯಕ್ಷತೆಯಲ್ಲಿ ನಡೆಯಿತು

- Advertisement -

ಪಕ್ಷದ ಇತ್ತೀಚಿನ ಬೆಳವಣಿಗೆ ಮತ್ತು ಮುಂದಿನ ಕಾರ್ಯಯೋಜನೆಯ ಬಗ್ಗೆ ಗ್ರಾಮ ಸಮಿತಿ ಸದಸ್ಯ ರಿಝ್ವಾನ್ ಸಜೀಪ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಅಶ್ರಫ್ ಬಡಾಜೆ, ಪಕ್ಷವು ನಡೆದು ಬಂದ ದಾರಿ ಮತ್ತು ಕಾರ್ಪೊರೇಟ್ ಕುಲಗಳ ಮದ್ಯದಲ್ಲಿ ಕೇಡರ್ ತಳಹದಿಯಲ್ಲಿ ಸಂಘಟಿಸಿರುವ ಪಕ್ಷದ ಮುಂದಿರುವ ಸವಾಲುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ದೇಶದಲ್ಲಿರುವ ಪ್ರತಿಯೊಬ್ಬ SDPI ಯ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುವ ಗ್ರಾಮವಾಗಿದೆ. ದೇಶದಲ್ಲಿ ಪ್ರಪ್ರಥಮವಾಗಿ ಪಂಚಾಯತ್‌ನಲ್ಲಿ ಅಧಿಕಾರಕ್ಕೆ ತಂದಿರುವ ಸಜೀಪನಡು ಗ್ರಾಮದ ಜನರು ಇನ್ನು ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ರೀತಿಯಲ್ಲಿ SDPI ಪಕ್ಷಕ್ಕೆ ತಮ್ಮ ಕೊಡುಗೆಯನ್ನು ನೀಡಲು ಸಿದ್ಧರಾಗಬೇಕಾಗಿ ಕರೆ ನೀಡಿದರು.

- Advertisement -

ಸಜೀಪನಡು ಗ್ರಾಮ ಸಮಿತಿ ಕಾರ್ಯದರ್ಶಿ ಶಾಫಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಕೊಣಾಜೆ ಬ್ಲಾಕ್ ಸಮಿತಿ ಅಧ್ಯಕ್ಷ ನವಾಝ್ ಸಜೀಪ ಸಮಾರೋಪ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಮತ್ತು ಸಜೀಪನಡು ಗ್ರಾಮದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದ ಸಮರ್ಪಿಸಿದರು.



Join Whatsapp