ಕಾರ್ಕಳ | ಪ್ರತಿ ಮನೆಯಲ್ಲೂ ತಲ್ವಾರ್ ಇರಲಿ: ಹಿಂದುತ್ವ ಕಾರ್ಯಕರ್ತರನ್ನು ಪ್ರಚೋದಿಸಿದ ಸಾಧ್ವಿ ಸರಸ್ವತಿ

Prasthutha|

► ಹಿಂಸೆ ಪ್ರಚೋದಿಸುವ ಕಾರ್ಯಕ್ರಮದ ವೇದಿಕೆಗೆ ಹುತಾತ್ಮ ಬಿಪಿನ್ ರಾವತ್ ಹೆಸರಿಟ್ಟ VHP !

- Advertisement -

ಕಾರ್ಕಳ: ಸದಾ ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ತುತ್ತಾಗುವ ಸಾಧ್ವಿ ಸರಸ್ವತಿ ಇದೀಗ ಪ್ರತೀ ಮನೆಯಲ್ಲಿ ತಲ್ವಾರ್ ಇರಲಿ ಎಂದು ಹಿಂದುತ್ವ ಕಾರ್ಯಕರ್ತರನ್ನು ಪ್ರಚೋದಿಸಿ ಭಾಷಣಗೈದಿದ್ದಾರೆ. ಭಾನುವಾರ ಕಾರ್ಕಳದ ಗಾಂಧಿ ಮೈದಾನದಲ್ಲಿ  ವಿಶ್ವ ಹಿಂದೂ ಪರಿಷದ್ ಭಜರಂಗದಳ ಉಡುಪಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಸರಸ್ವತಿ, ಕರ್ನಾಟಕದಲ್ಲಿ ಎಲ್ಲಿಯವರೆಗೆ ಹಿಂದು ಕಾರ್ಯಕರ್ತರ ತ್ಯಾಗವಿದೆಯೋ ಅಲ್ಲಿಯವರೆಗೆ ಹಿಂದೂ ಧರ್ಮ ನಶಿಸಿ ಹೋಗದು ಎಂದಿದ್ದಾರೆ.

 ಲಕ್ಷ ರೂಪಾಯಿಗಳನ್ನು ಕೊಟ್ಟು  ಕಂಪ್ಯೂಟರ್, ಫೋನ್ ಅನ್ನು ಖರೀದಿಸುವುದಾದರೆ, ಸಾವಿರ ರೂಪಾಯಿಯ ತಲ್ವಾರ್ ಅನ್ನು ಮನೆಯಲ್ಲಿ ತೆಗೆದು ಇಟ್ಟುಕೊಳ್ಳಿ ಎಂದು ಪ್ರಚೋದಿಸಿದ್ದಾರೆ. ಅಲ್ಲದೇ ಟಿಪ್ಪು ಸುಲ್ತಾನ್ ಪೂಜಿಸುವ ಮನಸ್ಸುಗಳನ್ನು ಧಿಕ್ಕರಿಸುವಂತೆ ಕರೆಕೊಟ್ಟಿದ್ದಾರೆ. ರಾಜ್ಯದಲ್ಲಿ ಪ್ರಖರತೆಯ ಮತಾಂತರ, ಲವ್ ಜಿಹಾದ್ ವಿರುದ್ದ ಮತ್ತು ಗೋರಕ್ಷಣೆಗಾಗಿ ಕಠಿಣ ಕಾನೂನು ತರುವಂತೆ ಸರಕಾರವನ್ನು ಇದೇ ಸಮಯದಲ್ಲಿ ಸಾಧ್ವಿ ಸರಸ್ವತಿ ಒತ್ತಾಯಿಸಿದ್ದಾರೆ.

- Advertisement -

ಇದೇ ವೇಳೆ  ಧರ್ಮಗಳ ಮಧ್ಯೆ ಭಿನ್ನತೆ ಸೃಷ್ಟಿಸುವ ಕಾರ್ಯಕ್ರಮಕ್ಕೆ ಇತ್ತೀಚೆಗಷ್ಟೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರ ಹೆಸರನ್ನು VHPಯು,  ವೇದಿಕೆಗೆ ಇಟ್ಟದ್ದು ವಿವಾದಕ್ಕೆ ಕಾರಣವಾಗಿದೆ.

Join Whatsapp