ಬೆಂಗಳೂರು | ರುಕ್ಸಾನಾ ನಿಗೂಢ ಸಾವು ಪ್ರಕರಣ: ಆರೋಪಿ ಪ್ರದೀಪ್ ಬಂಧನ

Prasthutha|

ಸಾಂದರ್ಭಿಕ ಚಿತ್ರ

- Advertisement -

ಬೆಂಗಳೂರು : ರುಕ್ಸಾನಾ ಎಂಬ ಮಹಿಳೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಿವಾಸಿ ಪ್ರದೀಪ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 31ರಂದು ಪೊಲೀಸರು 21 ವರ್ಷದ ರುಕ್ಸಾನಾಳ ಸುಟ್ಟು ಕರಕಲಾಗಿದ್ದ ದೇಹವನ್ನು ಪತ್ತೆ ಹಚ್ಚಿದ್ದರು. ವಿವಾಹವಾಗುವುದಾಗಿ ನಂಬಿಸಿ ರುಕ್ಸಾನಾಳೊಂದಿಗೆ ಪ್ರದೀಪ್ ಸಂಬಂಧ ಬೆಳೆಸಿದ್ದ. ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾಗ ರುಕ್ಸಾನಾ ತನ್ನ ಮಗುವಿನೊಂದಿಗೆ ಪ್ರದೀಪ್ ನನ್ನು ಭೇಟಿಯಾಗಿದ್ದಳು. ಆದರೆ, ಪ್ರದೀಪ್ ಗೆ ಅದಾಗಲೇ ವಿವಾಹವಾಗಿದ್ದುದರಿಂದ ಆತ ರುಕ್ಸಾನಾಳನ್ನು ವಿವಾಹವಾಗಲು ನಿರಾಕರಿಸಿದ್ದ ಎಂದು ಹೇಳಲಾಗಿದೆ.

- Advertisement -

ಬೆಂಗಳೂರಿನಲ್ಲಿರುವ ಪ್ರದೀಪ್ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದ ರುಕ್ಸಾನಾ, ತನ್ನನ್ನು ವಿವಾಹವಾಗುವಂತೆ ಆತನ ಮೇಲೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ನಾನು ರುಕ್ಸಾನಾಳ ಕಿರುಕುಳದಿಂದ ದಣಿದಿದ್ದರಿಂದ, ನಾನು ಆಕೆಯನ್ನು ಹತ್ಯೆಗೈಯ್ಯಲು ನಿರ್ಧರಿಸಿದೆ ಎಂದು ಪೊಲೀಸರಿಗೆ ಪ್ರದೀಪ್ ತಿಳಿಸಿದ್ದಾನೆ.

ರುಕ್ಸಾನಾ ಮತ್ತು ಅವರ ಮಗುವನ್ನು ಕಡೂರಿನ ತನ್ನ ಸ್ವಗ್ರಾಮಕ್ಕೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಬೆಂಗಳೂರಿಗೆ ವಾಪಸ್ಸು ಬರುವಾಗ ತುಮಕೂರಿನ ಬಳಿ ಪ್ರದೀಪ್ ರುಕ್ಸಾನಾಳನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ. ಮಗುವನ್ನು ಬೆಂಗಳೂರಿಗೆ ಕರೆತಂದು ಎತ್ತಿನಗಾಡಿ ಮೇಲೆ ಬಿಟ್ಟು ಹೋಗಿದ್ದಾನೆ. ಎತ್ತಿನಗಾಡಿ ಮಾಲೀಕರು ಮಗುವನ್ನು ಪತ್ತೆ ಹಚ್ಚಿ ಬೆಂಗಳೂರು ಉತ್ತರದ ಬಾಗಲಗುಂಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

Join Whatsapp