ಮಮತಾ ಬ್ಯಾನರ್ಜಿಯ TMC ಪಕ್ಷಕ್ಕೆ ಸೇರ್ಪಡೆಯಾದ ಆರ್.ಟಿ.ಐ ಕಾರ್ಯಕರ್ತ ಸಾಕೇತ್ ಗೋಖಲೆ

Prasthutha|

ಕೋಲ್ಕತ್ತ: ಆರ್.ಟಿ.ಐ ಕಾರ್ಯಕರ್ತರಾದ ಸಾಕೇತ್ ಗೋಖಲೆ ಅವರು ಆಗಸ್ಟ್ 12 ರಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡೆಕೆರ್ ಒ’ ಬ್ರೇನ್, ಸೌಗತ್ ರಾಯ್ ಮತ್ತು ಯಶವಂತ್ ಸಿನ್ಹಾ ಅವರು ಉಪಸ್ಥಿತರಿದ್ದರು.

- Advertisement -

ಮಮತಾ ಬ್ಯಾನರ್ಜಿಯವರ ರಾಜಕೀಯ ಕಾರ್ಯಚಟುವಟಿಕೆಯಿಂದ ಪ್ರೇರಿತವಾಗಿ ಟಿ.ಎಮ್.ಸಿ ಸೇರುತ್ತಿರುವುದಾಗಿ ಅವರು ಘೋಷಿಸಿದರು. ನೂತನವಾಗಿ ಸೇರ್ಪಡೆಯಾದ ಗೋಖಲೆ ಅವರನ್ನು ಪಕ್ಷದ ಮುಖಂಡರಾದ ಸೌಗತ್ ರಾಯ್, ಯಶವಂತ್ ಸಿನ್ಹಾ ಮತ್ತು ಡೇರೆಕ್ ಒ’ಬ್ರೇನ್ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಟಿ.ಎಮ್.ಸಿಗೆ ಸೇರ್ಪಡೆಗೊಂಡ ಸಾಕೇತ್ ಗೋಖಲೆ ಅವರು ಪಾರದರ್ಶಕ ತನಿಖಾಧಿಕಾರಿ, ಸಾಮಾಜಿಕ ಕಾರ್ಯಕರ್ತ ಮತ್ತು ವಿದೇಶಿ ವರದಿಗಾರರು ಎಂದು ಟಿ.ಎಮ್.ಸಿ ತಿಳಿಸಿದೆ. ಗೋಖಲೆ ಅವರು ಈ ಹಿಂದೆ ಹಿಂದೂಸ್ತಾನ್ ಟೈಮ್ಸ್ ನಲ್ಲಿ ನಿರ್ದೇಶಕರಾಗಿ, ಡಿಜಿಟಲ್ ವಿಷಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಫೈನಾನ್ಶಿಯಲ್ ಟೈಮ್ಸ್ ನ ವರದಿಗಾರರಾಗಿಯೂ ಕೆಲಸ ಮಾಡಿರುವುದು ಹೆಮ್ಮೆಯ ವಿಷಯವೆಂದು ಟಿ.ಎಮ್.ಸಿ ಬಣ್ಣಿಸಿದೆ.

- Advertisement -

ಇತ್ತೀಚೆಗೆ ದೇಶದಾಧ್ಯಂತ ಸಂಚಲನ ಮೂಡಿಸಿದ್ದ ಪೆಗಾಸೆಸ್ ಸ್ಪೈವೇರ್ ಕದ್ದಾಲಿಕೆ ನಡೆಸಲು ಗೃಹ ಸಚಿವಾಲಯದ ಬಜೆಟ್ ಹಂಚಿಕೆಯಲ್ಲಿನ ದುರುಪಯೋಗದ ವಿರುದ್ಧ ಗೋಖಲೆ ಅವರು ಆರ್.ಟಿ.ಐ ಅರ್ಜಿ ಸಲ್ಲಿಸಿದ್ದರು ಎಂದು ಟಿ.ಎಮ್.ಸಿ ಮಾಧ್ಯಮಕ್ಕೆ ತಿಳಿಸಿದೆ.

Join Whatsapp