ಪ್ರೇಮಿಸಿದ ಯುವಕನನ್ನು ಕೊಂದು ರೈಲ್ವೇ ಹಳಿಗೆಸೆದ ಖಾನಾಪುರದಲ್ಲಿ RSS ಪಥ ಸಂಚಲನ : ಆತಂಕದಲ್ಲಿ ಸಾರ್ವಜನಿಕರು !

Prasthutha|

►ಅರ್ಬಾಝ್ ಎಂಬ ಯುವಕನ ಛಿದ್ರಗೊಂಡ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ !

- Advertisement -

ಇತ್ತೀಚೆಗೆ ಬೆಳಗಾಂನ ಖಾನಾಪುರದಲ್ಲಿ ಹಿಂದೂ ಯುವತಿಯೋರ್ವಳನ್ನು ಪ್ರೀತಿಸಿದ ಕಾರಣಕ್ಕಾಗಿ ಅರ್ಬಾಝ್ ಎನ್ನುವ ಯುವಕನ ಕಾಲು , ತಲೆ ಕಡಿದು ಕೊಂದು ಬಳಿಕ ಶವವನ್ನು ರೈಲ್ವೇ ಹಳಿಯಲ್ಲಿ ಎಸೆಯಲಾಗಿತ್ತು. ಈ ಘಟನೆ ಸೆಪ್ಟಂಬರ್ 28ರಂದು ನಡೆದಿತ್ತು ಎನ್ನಲಾಗಿದೆ. ಇದೀಗ ಘಟನೆಯ ಕರಾಳತೆ ಮಾಸುವ ಮುನ್ನವೇ ಒಂದು ವಾರದಲ್ಲೇ ಕೋಮುವಾದಿ ಆರೆಸ್ಸೆಸ್ ಸಂಘಟನೆ ನಗರದಲ್ಲಿ ಪಥ ಸಂಚಲನವನ್ನು ನಡೆಸಿದ್ದು, ಪ್ರದೇಶದ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕೋಮು ಸೂಕ್ಷ್ಮ ಪರಿಸ್ಥಿತಿಯಲ್ಲಿ ಶಾಂತಿ ಕದಡುವ ಪಥ ಸಂಚಲನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದಾದರೂ ಹೇಗೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಥ ಸಂಚಲನದ ಕುರಿತಂತೆ ಕನ್ನಡ ಸಂಘದ ಮುಖ್ಯಸ್ಥ ಮಾತನಾಡುತ್ತಾ, ಪಥ ಸಂಚಲನ ಅಲ್ಪಸಂಖ್ಯಾತರನ್ನು ಭಯಭೀತಗೊಳಿಸುವ ಪ್ರಯತ್ನ ಎಂದು ಕಿಡಿ ಕಾರಿದ್ದಾರೆ. ಇಂತಹಾ ಸಮಯದಲ್ಲಿ ಶಾಂತಿ ಕದಡುವಂತಹಾ ಪಥಸಂಚಲನಕ್ಕೆ ಅನುಮತಿ ನೀಡಬಾರದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Join Whatsapp