ಬಿಜೆಪಿ ಸರಕಾರದ ವೈಫಲ್ಯವನ್ನು ಮರೆಮಾಚಲು ಆರೆಸ್ಸೆಸ್ ಜನಸಂಖ್ಯಾ ನೀತಿ ಮತ್ತು ಮತಾಂತರ ವಿಚಾರವನ್ನು ಮತ್ತೆ ಮತ್ತೆ ಕೆದಕುತ್ತಿದೆ – ಮಾಯಾವತಿ

Prasthutha|

ಲಕ್ನೋ: ಬಿಜೆಪಿ ಸರಕಾರದ ವೈಫಲ್ಯಗಳನ್ನು ಮರೆ ಮಾಚಲು ಆರೆಸ್ಸೆಸ್ – ಸಂಘಪರಿವಾರ ಜನಸಂಖ್ಯಾ ನೀತಿ ಮತ್ತು ಮತಾಂತರ ವಿಚಾರಗಳನ್ನು ಮತ್ತೆ ಮತ್ತೆ ಕೆದಕಿ, ದಿಕ್ಕು ತಪ್ಪಿಸುತ್ತಿದೆ ಎಂದು ಬಿ ಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

- Advertisement -

ಇಂತಹ ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತಂದು ಬಿಜೆಪಿಯ ವಿರುದ್ಧವಿರುವ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಂಘಪರಿವಾರ ಪ್ರಯತ್ನ ಪಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಹಣದುಬ್ಬರ, ನಿರುದ್ಯೋಗ, ಹಿಂಸಾಕೃತ್ಯಗಳು ಮತ್ತು ಸಾಮಾಜಿಕ ಶಾಂತಿಭಂಗಗಳಂತಹ ಗಂಭೀರ ಸಮಸ್ಯೆಗಳಿಂದ ದೇಶವು ತತ್ತರಿಸುತ್ತಿರುವಾಗ ಇಂತಹ ನೈಜ ಸಮಸ್ಯೆಗಳಿಂದ ಜನರ ಚಿತ್ತವನ್ನು ಬೇರೆಡೆಗೆ ಸೆಳೆಯಲು ಆರ್‌ಎಸ್‌ಎಸ್‌ ಮತಾಂತರ ಮತ್ತು ಜನಸಂಖ್ಯಾ ನೀತಿ ವಿಚಾರಗಳನ್ನು ಕೆದಕುತ್ತಿವೆ ಎಂದಿದ್ದಾರೆ.

- Advertisement -

ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಇತ್ತೀಚೆಗೆ ಜನಸಂಖ್ಯಾ ನೀತಿ ಬಗ್ಗೆ ಮಾತನಾಡಿದ್ದಕ್ಕೆ ಮಾಯಾವತಿ ಈ ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Join Whatsapp