ಹಿಂದೂ-ಮುಸ್ಲಿಂ ವಿವಾದದ ಹಿಂದೆ RSS ಇಲ್ಲ, ಕೆಲ ಹಿಂದೂ ಸಂಘಟನೆಗಳಿವೆ: ಸಚಿವ ಮಾಧುಸ್ವಾಮಿ

Prasthutha|

ಹಾಸನ: ಹಿಂದೂ-ಮುಸ್ಲಿಂ ವಿವಾದದ ಹಿಂದೆ RSS ಇಲ್ಲ. ಆದರೆ ಕೆಲ ಹಿಂದೂ ಸಂಘಟನೆಗಳಿವೆ. ಅದನ್ನು ನಾವು ಇಲ್ಲ ಅನ್ನುವುದಿಲ್ಲ. ಮುತಾಲಿಕ್ ಹಾಗೂ ಬಜರಂಗದಳದವರು ಮಾತನಾಡಿದರೆ ಆರ್.ಎಸ್.ಎಸ್ ಅನ್ನೋಕೆ ಆಗುತ್ತಾ? ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಪ್ರಶ್ನಿಸಿದರು.

- Advertisement -

ರಾಜ್ಯದಲ್ಲಿ ಹಿಂದೂ-ಮುಸ್ಲಿಂ ವಿಚಾರವಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ನನ್ನ ದೃಷ್ಟಿಯಲ್ಲಿ ಇದೆಲ್ಲಾ ಅನಗತ್ಯ. ಒಂದು ಕಡೆ ಇದ್ದಾಗ ಹಾಗೆಲ್ಲಾ ಮಾಡೋಕೆ ಆಗುತ್ತಾ?, ಇದೆಲ್ಲ ತಪ್ಪು. ನಾವೆಲ್ಲಾ ಮನುಷ್ಯರು, ಒಂದೇ ದೇಶದಲ್ಲಿ ಬದುಕುತ್ತಿದ್ದೇವೆ. ಇದೆಲ್ಲ ವಿವಾದ ಮಾಡುವ ವಿಷಯಗಳಲ್ಲ. ಆದರೆ, ಏನೇನೋ ನಡೆಯುತ್ತಿದೆ. ನಾವು ಏನು ಹೇಳೋಕಾಗುತ್ತೆ?. ಹಿಂದೂ ಪರ ಸಂಘಟನೆಗಳ ಮಾವು, ಕ್ಯಾಬ್ ಬ್ಯಾನ್ ವಿವಾದಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.

Join Whatsapp