ಭ್ರಷ್ಟಾಚಾರದ ಹೆಗ್ಗಣಗಳು ಈಗ ಗೋಣಿಚೀಲವನ್ನೂ ಕೊರೆಯುತ್ತಿವೆ: ಕಾಂಗ್ರೆಸ್

Prasthutha|

ಬೆಂಗಳೂರು:. ಎಲ್ಲದರಲ್ಲೂ ಅಕ್ರಮ ನಡೆಸಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಪರಮಾವಧಿಗೆ ತಲುಪಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಭ್ರಷ್ಟಾಚಾರದ ಹೆಗ್ಗಣಗಳು ಈಗ ಗೋಣಿಚೀಲವನ್ನೂ ಕೊರೆಯುತ್ತಿವೆ. ಎಲ್ಲದರಲ್ಲೂ ಅಕ್ರಮ ನಡೆಸಿದ ಬಿಜೆಪಿ ಸರ್ಕಾರ ರೈತರ ಪಾಲಿನ ಗೋಣಿಚೀಲದಲ್ಲೂ ಲೂಟಿ ನಡೆಸಿ ಪರಮಾವಧಿಗೆ ತಲುಪಿದೆ. ಸಿಎಂ ಬೊಮ್ಮಾಯಿ ಅವರು ದಮ್ಮು ತಾಕತ್ತು ತೋರದಿರುವುದೇಕೆ? ಅವರ ತಾಕತ್ತು ವೇದಿಕೆಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದೆ.
ಸಿಟಿ ರವಿ ಅವರೇ, ಕಚ್ಚೆ ಹರುಕರು ಯಾರು ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ.


◆ಸಿಡಿಗೆ ತಡೆಯಾಜ್ಞೆ ತಂದವರು. ◆ಅತ್ಯಾಚಾರ ಆರೋಪದಲ್ಲಿ ರಾಜೀನಾಮೆ ಕೊಟ್ಟವರು. ◆ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ವಿಡಿಯೋಗಳು ಹೊರ ಬಂದಿದ್ದು ಯಾವ ಪಕ್ಷದವರದ್ದು? ಹರಿದಿರುವ ನಿಮ್ಮವರ ಕಚ್ಚೆಗಳನ್ನು ಬಿಗಿಯಾಗಿ ಕಟ್ಟಿ, ನಂತರ ಮಾತಾಡಲು ಬನ್ನಿ ಎಂದು ಕಾಂಗ್ರೆಸ್ ಖಾರವಾಗಿಯೇ ಟೀಕಿಸಿದೆ.

Join Whatsapp