ರಸಗೊಬ್ಬ ಹಗರಣ | ಜಾರಿ ನಿರ್ದೇಶನಾಲಯದಿಂದ ಆರ್‌ಜೆಡಿ ಸಂಸದ ಬಂಧನ

Prasthutha|

ನವದೆಹಲಿ : ರಸಗೊಬ್ಬರ ಹಗರಣದಲ್ಲಿ ಅಕ್ರಮ ಹಣಕಾಸು ಲೇವಾದೇವಿ ಮಾಡಿದ ಆರೋಪದಲ್ಲಿ ಆರ್‌ ಜೆಡಿ ರಾಜ್ಯಸಭಾ ಸಂಸದ ಅಮರೇಂದ್ರ ಧರಿ ಸಿಂಗ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

- Advertisement -

ಹಣಕಾಸು ಲೇವಾದೇವಿ ತಡೆ ಕಾಯ್ದೆಯಡಿಯಲ್ಲಿ ಸಂಸದ ಸಿಂಗ್‌ ಮತ್ತು ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ. ಇಪ್ಕೊ ಮತ್ತು ಇಂಡಿಯಾ ಪೊಟಾಷ್‌ ಲಿಮಿಟೆಡ್‌ ಕಂಪೆನಿಗಳಿಗೆ ಸಂಬಂಧಿಸಿದ ಹಗರಣ ಇದಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಸಿಬಿಐ ಪ್ರಕರಣ ದಾಖಲಿಸಿತ್ತು. ಸಂಸದ ಸಿಂಗ್‌ ಅವರು ಈ ಪ್ರಕರಣದಲ್ಲಿ ಶಾಮೀಲಾಗಿರುವ ಜ್ಯೋತಿ ಟ್ರೇಡಿಂಗ್‌ ಕಾರ್ಪೊರೇಶನ್‌ ಎಂಬ ಕಂಪೆನಿಯ ಹಿರಿಯ ಉಪಾಧ್ಯಕ್ಷರಾಗಿದ್ದಾರೆ ಎನ್ನಲಾಗಿದೆ.

Join Whatsapp