ಜ್ಯುವೆಲ್ಲರಿಯಲ್ಲಿ ಉಂಗುರ ಕಳ್ಳತನ; ಸಿಕ್ಕಿಬಿದ್ದ ಕಳ್ಳ

Prasthutha|

ಉಡುಪಿ : ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಉಂಗುರ ಕದ್ದು ಸಿಕ್ಕಿ ಬಿದ್ದ ಘಟನೆ ನಗರದ ಕೆನರಾ ಜ್ಯುವೆಲ್ಲರಿಯಲ್ಲಿ ನಡೆದಿದೆ.

- Advertisement -


ಆರೋಪಿಯನ್ನು ಕಾಸರಗೋಡು ನಿವಾಸಿ ಸಾಜು ಎಂದು ಗುರುತಿಸಲಾಗಿದೆ. ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ಈತ ಉಂಗುರ ತೋರಿಸುವಂತೆ ಹೇಳಿದ್ದ.ಉಂಗುರ ತೋರಿಸುತ್ತಿರುವಾಗ ಚೈನ್ ತೋರಿಸಿ ಎಂದಿದ್ದಾನೆ. ಜ್ಯುವೆಲ್ಲರಿಯವರು ಚೈನ್ ತೋರಿಸುವ ವೇಳೆ ಉಂಗುರ ಎಗರಿಸಿ ಪರಾರಿಯಾಗಲು ಯತ್ನಿಸಿದ ಆತನನ್ನು ಜ್ಯುವೆಲ್ಲರಿ‌ಯ ಮಾಲಕ ಸ್ಥಳೀಯರ ನೆರವಿನಿಂದ ಬೆನ್ನಟ್ಟಿ ಹಿಡಿದು ಉಂಗುರ ವಾಪಾಸು ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

Join Whatsapp