ತೌಕ್ತೆ ಚಂಡಮಾರುತ ಅಬ್ಬರ | ಮಂಗಳೂರಿಗೆ ಭೇಟಿ ನೀಡಿದ ಕಂದಾಯ ಸಚಿವ ಆರ್. ಅಶೋಕ್

Prasthutha|

ಮಂಗಳೂರು : ತೌಕ್ತೆ ಚಂಡಮಾರುತದಿಂದ ದ.ಕ ಜಿಲ್ಲೆಯಲ್ಲಿ ತೀವ್ರವಾಗಿ ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಂಗಳೂರಿನ ಎನ್.ಎಂ.ಪಿ.ಟಿ ಗೆ ಆಗಮಿಸಿ ಚಂಡಮಾರುತದ ಅಲೆಗಳ ರಭಸಕ್ಕೆ ಸಮುದ್ರದಲ್ಲಿ ಸಿಲುಕಿ ಬಳಿಕ ರಕ್ಷಣೆಯಾದ ಕಾರ್ಮಿಕರನ್ನು ಭೇಟಿಯಾಗಿದ್ದಾರೆ.

- Advertisement -

ಈ ವೇಳೆ ಕಾರ್ಮಿಕರ ಬಳಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.  ಎನ್.ಎಂ.ಪಿ.ಟಿ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಅಶೋಕ್, ಚಂಡಮಾರುತದ ಪರಿಣಾಮದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಸಂಜೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

Join Whatsapp