ಗಣರಾಜ್ಯೋತ್ಸವ ದಿನಾಚರಣೆ: ಸುಳ್ಯ SDPI ವತಿಯಿಂದ ಧ್ವಜಾರೋಹಣ, ಸಂವಿಧಾನ ದೀಕ್ಷೆ

Prasthutha|

ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಬ್ಲಾಕ್ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ  ಮತ್ತು ಸಂವಿಧಾನ ಧೀಕ್ಷೆ ಕಾರ್ಯಕ್ರಮವೂ ಗಾಂಧಿನಗರದಲ್ಲಿ ನಡೆಯಿತು.

- Advertisement -

ನಾವೂರು ಬೂತ್ ಅಧ್ಯಕ್ಷ ಅಝೀಝ್ ರವರು ಧ್ವಜಾರೋಹಣಗೈದರು,ಎಸ್‌ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ರವರು ಸಂದೇಶ ಭಾಷಣ ಮಾಡಿದರು ಹಾಗೂ ವಿಧಾನಸಭಾ ಸಮಿತಿ ಸದಸ್ಯ ಸಾಜಿದ್ ಬೋರುಗುಡ್ಡೆ  ಸಂವಿಧಾನ ದೀಕ್ಷೆ ಬೋಧಿಸಿದರು.

ವಿಧಾನಸಭಾ ಸಮಿತಿ ಸದಸ್ಯರಾದ ಸೊಹೈಲ್ ಸ್ವಾಗತಿಸಿ ನಿರೂಪಿಸಿದರು.

- Advertisement -

ಕಾರ್ಯಕ್ರಮದಲ್ಲಿ ಸುಳ್ಯ ಬ್ಲಾಕ್ ಬೂತ್ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Join Whatsapp