ಅನ್ನದಾತರ ಪ್ರತಿಭಟನೆಯೊಂದಿಗೆ ಆಚರಿಸುತ್ತಿರುವ ಗಣರಾಜ್ಯೋತ್ಸವವು ಯತಾರ್ಥ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲಿ : ಶಾಹಿದಾ ಎ

Prasthutha|

ಮಂಗಳೂರು : ನ್ಯಾಷನಲ್  ವಿಮೆನ್ಸ್ ಫ್ರಂಟ್ ಕರ್ನಾಟಕದ ವತಿಯಿಂದ 72ನೇ ಗಣರಾಜ್ಯೋತ್ಸವವನ್ನು ಮಂಗಳೂರಿನಲ್ಲಿ  ಆಚರಿಸಲಾಯಿತು.

- Advertisement -

ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ರಾಷ್ಟ್ರಧ್ಯಕ್ಷೆ ಶಾಹಿದಾ ಎ. ಅವರು, ಅನ್ನದಾತರ ಟ್ರ್ಯಾಕ್ಟರ್ ಪರೇಡ್ ಪ್ರತಿಭಟನೆಯೊಂದಿಗೆ ಆಚರಿಸುತ್ತಿರುವ 72ನೇ ಗಣರಾಜ್ಯೋತ್ಸವವು ಯತಾರ್ಥ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಮೆನ್ ಇಂಡಿಯಾ ಮೂವ್ಮೆಂಟ್ ಇದರ ರಾಜ್ಯ ಅಧ್ಯಕ್ಷೆ ಶಾಹಿದಾ ತಸ್ನೀಂ ಅವರು, ಅಪಾಯದಂಚಿನಲ್ಲಿರುವ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ, ಅಂಬೇಡ್ಕರ್ ಅವರ ತತ್ವಾದರ್ಶಗಳು ಜೀವಂತ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

- Advertisement -

ನ್ಯಾಷನಲ್ ವಿಮೆನ್ಸ್ ಫ್ರಂಟ್ ಇದರ ನಾಯಕಿಯರಾದ  ಝೀನತ್, ಸೈದಾ, ಫಾತಿಮಾ ನಸೀಮಾ, ರಮ್ಲತ್ ಉಪಸ್ಥಿತರಿದ್ದರು. ನಸೀಮ್  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು .

Join Whatsapp